Home ಕೃಷಿ ಏಕಾಏಕಿ ಹೊತ್ತಿಕೊಂಡ ಬೆಂಕಿಗೆ 14 ಎಕರೆ ಕಬ್ಬು ಆಹುತಿ! ಬೆಂಕಿಯ ತೀವ್ರತೆಗೆ ಪೆಟ್ರೋಲ್ ಬಂಕ್ ಗೂ ಭೀತಿ; ಉಡಿಕೇರಿಯಲ್ಲಿ ಏನಾಯ್ತು?

ಏಕಾಏಕಿ ಹೊತ್ತಿಕೊಂಡ ಬೆಂಕಿಗೆ 14 ಎಕರೆ ಕಬ್ಬು ಆಹುತಿ! ಬೆಂಕಿಯ ತೀವ್ರತೆಗೆ ಪೆಟ್ರೋಲ್ ಬಂಕ್ ಗೂ ಭೀತಿ; ಉಡಿಕೇರಿಯಲ್ಲಿ ಏನಾಯ್ತು?

0
ಏಕಾಏಕಿ ಹೊತ್ತಿಕೊಂಡ ಬೆಂಕಿಗೆ 14 ಎಕರೆ ಕಬ್ಬು ಆಹುತಿ! ಬೆಂಕಿಯ ತೀವ್ರತೆಗೆ ಪೆಟ್ರೋಲ್ ಬಂಕ್ ಗೂ ಭೀತಿ; ಉಡಿಕೇರಿಯಲ್ಲಿ ಏನಾಯ್ತು?

ಬೆಳಗಾವಿ, ನವೆಂಬರ್ 29: ಬೈಲಹೊಂಗಲ ತಾಲೂಕಿನ ಉಡಿಕೇರಿಯಲ್ಲಿ ಏಕಾಏಕಿ ಹೊತ್ತಿಕೊಂಡ ಬೆಂಕಿ ಸುಮಾರು 14ಎಕರೆ ಕಬ್ಬಿನ ಬೆಳೆಯನ್ನು ಆಹುತಿ ಪಡೆದುಕೊಂಡಿದೆ!

ಕಬ್ಬಿನ ಗದ್ದೆಗೆ ವಿದ್ಯುತ್ ತಂತಿ ತಗುಲಿ ಬೆಂಕಿ ಹೊತ್ತಿದ ಪರಿಣಾಮ ಸುಮಾರು 14 ಎಕರೆಯಲ್ಲಿ ಬೆಳೆದಿದ್ದ ಕಬ್ಬು ಸುಟ್ಟು ಭಸ್ಮವಾಗಿದೆ.ಬೆಂಕಿಯ ಕೆನ್ನಾಲಿಗೆ ಬದಿಯ ಪೆಟ್ರೋಲ್ ಬಂಕ್ ಸುತ್ತಲೂ ಆವರಿಸಿ ಜನರಲ್ಲಿ ಇನ್ನಷ್ಟು ಭೀತಿ ಹುಟ್ಟಿಸಿತು!

ಜನರು ಬೆಂಕಿ ನಂದಿಸಲು ಹರಸಾಹಸ ಪಟ್ಟರು‌. ಬಳಿಕ ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ತೆರಳಿ ಬೆಂಕಿ ನಂದಿಸಿದರು. ಅದೃಷ್ಟವಶಾತ್ ಯಾವುದೇ ಅನಾಹುತ ಸಂಭವಿಸಿಲ್ಲ. ಸ್ಥಳಕ್ಕೆ ದೊಡವಾಡ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

LEAVE A REPLY

Please enter your comment!
Please enter your name here