Home ಸ್ಥಳೀಯ ಗ್ಯಾರಂಟಿ ಅಬ್ಬರದ ನಡುವೆಯೂ ಸಿದ್ದರಾಮಯ್ಯ ಕಿತ್ತೂರು‌ ಅಭಿವೃದ್ದಿಗೆ ಒತ್ತು : ಪಂಚಾಕ್ಷರಿ ನಿಚ್ಚಣಕಿ ಶ್ರೀಗಳು

ಗ್ಯಾರಂಟಿ ಅಬ್ಬರದ ನಡುವೆಯೂ ಸಿದ್ದರಾಮಯ್ಯ ಕಿತ್ತೂರು‌ ಅಭಿವೃದ್ದಿಗೆ ಒತ್ತು : ಪಂಚಾಕ್ಷರಿ ನಿಚ್ಚಣಕಿ ಶ್ರೀಗಳು

0
ಗ್ಯಾರಂಟಿ ಅಬ್ಬರದ ನಡುವೆಯೂ ಸಿದ್ದರಾಮಯ್ಯ ಕಿತ್ತೂರು‌ ಅಭಿವೃದ್ದಿಗೆ ಒತ್ತು : ಪಂಚಾಕ್ಷರಿ ನಿಚ್ಚಣಕಿ ಶ್ರೀಗಳು

ಚನ್ನಮ್ಮನ ಕಿತ್ತೂರು, ಅಕ್ಟೋಬರ್ 25: ಹೊಂಡದ ಬಸವೇಶ್ವರ ದೇವಸ್ಥಾನದ ಶಿಲಾ ಶಾಸನದಲ್ಲಿ ಕಿತ್ತೂರು 11ನೇ ಶತಮಾನದಲ್ಲಿತ್ತು ಎಂದು ಹೇಳಲಾಗುತ್ತಿದೆ. ಕಿತ್ತೂರು ಶಾಸನಗಳು ಗೋವಾ ಕದಂಬರ ಕಾಲದಿಂದಲೂ ಲಭ್ಯ ಇದ್ದು, ಅರಮನೆ ಗುರುಮನೆ ಪರಂಪರೆ ರಾಣಿಯರ ಪರಾಕ್ರಮ ಅವಲೋಕಿಸಿದಾಗ ಚನ್ನಮ್ಮಾಜಿ ಪ್ರಮುಖರಾಗಿದ್ದಾರೆ ಎಂದು ಪಂಚಾಕ್ಷರಿ ನಿಚ್ಚಣಕಿ ಶ್ರೀಗಳು ಹೇಳಿದರು.

ಚನ್ನಮ್ಮನ ಕಿತ್ತೂರು ಉತ್ಸವದ ಸಮಾರೋಪ ಸಮಾರಾಭದಲ್ಲಿ ಅವರು. ಮಾತನಾಡಿದರು

ಶಿಕ್ಷಣ ಸಂಸ್ಥೆಗಳ ಕೊರತೆ ಕಿತ್ತೂರು ಪಟ್ಟಣದಲ್ಲಿದ್ದು ಇಲ್ಲಿನ ಮಕ್ಕಳು ಶಿಕ್ಷಣಕ್ಕಾಗಿ ದೂರದ ಪಟ್ಟಣಕ್ಕೆ ಹೋಗುವ ಅನಿವಾರ್ಯತೆ ಇದೆ ಹೀಗಾಗಿ ಈ ಭಾಗದಲ್ಲಿ ಶಿಕ್ಷಣಕ್ಕೆ ಪ್ರಾಮುಖ್ಯತೆ ನೀಡಬೇಕಾಗಿದೆ. ಗ್ಯಾರಂಟಿ ಅಬ್ಬರದ ನಡುವೆಯೂ ಸಿಎಂ ಸಿದ್ದರಾಮಯ್ಯ ಅವರು ಸಾಕಷ್ಟು ಅನುದಾನ ಕಿತ್ತೂರು‌ ಅಭಿವೃದ್ದಿಗೆ ನೀಡಿದ್ದು ಶ್ಲಾಘನೀಯ ಎಂದರು.

ಜಮಖಂಡಿಯಲ್ಲಿ ಚನ್ನಮ್ಮಾಜಿಯ ರಥದ ಗಾಲಿಗಳು ಇವೆ, ನಿಡಸೋಸಿ ಮಠದಲ್ಲಿ ಕೆಲವು ವಸ್ತುಗಳು ಲಭ್ಯವಿದ್ದು ಇವುಗಳನ್ನು ಪುನಃ ಕಿತ್ತೂರಿನ ಮ್ಯೂಸಿಯಂಗೆ ತರುವ ಕೆಲಸವಾಗಬೇಕು. ರಾಯಣ್ಣನಿಗೆ ಸಿಕ್ಕ ಪ್ರಾತಿನಿಧ್ಯ ಚನ್ನಮ್ಮಾಜಿಗೆ ಸಿಕ್ಕಿಲ್ಲ ಅನ್ನೋದು ವಾಸ್ತವ ಸತ್ಯ.ಇಷ್ಟರ ಮಟ್ಟಿಗಿನ ಅಭಿವೃದ್ಧಿ ಕಾಣೋದಕ್ಕೆ 200 ವರ್ಷ ಬೇಕಾಯ್ತು. ಇದಕ್ಕಾಗಿ ತಂಡ ಕಟ್ಟಿಕೊಂಡು ಸಂಘಟನೆ ಮೂಲಕ ಹೋರಾಟ ಮಾಡುವ ಅವಶ್ಯವಿದೆ ಎಂದರು

LEAVE A REPLY

Please enter your comment!
Please enter your name here