
ಬೆಳಗಾವಿ, ನವೆಂಬರ್ 13: ರಾಯಬಾಗದ ಕಾಂಗ್ರೆಸ್ ಮುಖಂಡ ಅಪ್ಪಾಸಾಹೇಬ್ ಕುಲಗೋಡೆ ಬೆಳಗಾವಿ ಡಿಸಿಸಿ ಬ್ಯಾಂಕ್ ಅಧ್ಯಕ್ಷರಾಗುವ ನಿರ್ಣಯ ಹೊರಬಿದ್ದಿದೆ.
ಜಾರಕಿಹೊಳಿ ಬ್ರದರ್ಸ್ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ನೂತನ ಅಧ್ಯಕ್ಷರ ಆಯ್ಕೆಯಾಗಿದೆ.
ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷರಾಗಿ ಸುಭಾಷ ಡವಳೇಶ್ವರ ಮುಂದುವರೆಯಲಿದ್ದಾರೆ.
ಬ್ಯಾಂಕ್ ಅಧ್ಯಕ್ಷ ಸ್ಥಾನದ ಮ್ಮತದ ಅಭ್ಯರ್ಥಿ ಹೆಸರನ್ನು ಸಚಿವ ಸತೀಶ್ ಜಾರಕಿಹೊಳಿ ಘೋಷಿಸಿದ್ದಾರೆ.
ಅಧ್ಯಕ್ಷ ಸ್ಥಾನದ ಅಭ್ಯರ್ಥಿ ಹೆಸರು ಅಚ್ಚರಿ ರೀತಿಯಲ್ಲಿ ಆಯ್ಕೆ ಆಗಿರುವುದು ಜಾರಕಿಹೊಳಿ ಬ್ರದರ್ಸ್ ಪೊಲಿಟಿಕಲ್ ಸ್ಟ್ರೈಟರ್ಜಿ ಗೆ ಉದಾಹಣೆಯಾಗಿದೆ.