
ಬೆಳಗಾವಿ, ನವೆಂಬರ್ 09: ತಾಲೂಕಿನ ಸೋನಟ್ಟಿ ಸರ್ಕಾರಿ ಹಿರಿಯಪ್ರಾಥಮಿಕ ಕನ್ನಡ ಶಾಲೆಯ 17 ವಿದ್ಯಾರ್ಥಿಗಳನ್ನು ಶಿಕ್ಷಕ ಪ್ರಕಾಶ ದೇಯಣ್ಣವರ ಎಂಬುವವರು ತಮ್ಮ ಸ್ವಂತ ಖರ್ಚಿನಲ್ಲಿ ಮಕ್ಕಳನ್ನು ಪ್ರವಾಸಕ್ಕೆಕರೆದೊಯ್ದಿದ್ದಾರೆ.
ಒಂದು ವರ್ಷದ ಹಿಂದೆ ಪಾಠ ಮಾಡುವ ಸಂದರ್ಭದಲ್ಲಿ ಶಿಕ್ಷಕ ಪ್ರಕಾಶ್ ಮಕ್ಕಳಿಗೆ ಒಂದು ಮಾತು ಕೊಟ್ಟಿದ್ದರು. ರಜೆ ಮಾಡದೇ ಶಾಲೆಗೆ ಬಂದರೆ ಅವರನ್ನು ವಿಮಾನಯಾನದ ಮೂಲಕ ಪ್ರವಾಸಕ್ಕೆ ಕರೆದುಕೊಂಡು ಹೋಗುವುದಾಗಿ ಪ್ರಕಾಶ್ ಮಕ್ಕಳಿಗೆ ಭಾಷೆ ಕೊಟ್ಟಿದ್ದರು.
ಕೊಟ್ಟ ಮಾತಿನಂತೆ ಶಾಲೆಯ 17 ವಿದ್ಯಾರ್ಥಿಗಳನ್ನು ಕರೆದುಕೊಂಡು ಶಿಕ್ಷಕ ಪ್ರಕಾಶ್ ಬೆಳಗಾವಿ ಸಾಂಬ್ರಾ ವಿಮಾನ ನಿಲ್ದಾಣದ ಮೂಲಕ ಹೈದಾರಾಬಾದ್ ಗೆ ಪ್ರಯಾಣ ಬೆಳೆಸಿದ್ದಾರೆ. ಮೊದಲ ಬಾರಿಗೆ ವಿಮಾನದಲ್ಲಿ ಸಂಚರಿಸಿದ ಮಕ್ಕಳು ಯಾನವನ್ನು ಸಂಭ್ರಮಿಸಿದ್ದಾರೆ
ಪ್ರವಾಸದ ಒಟ್ಟು ವೆಚ್ಚ 2.50ಲಕ್ಷದಲ್ಲಿ ಶಿಕ್ಷಕ ಪ್ರಕಾಶ್ 2ಲಕ್ಷ ವ್ಯಯಿಸಿ ಬಾಕಿ ಮೊತ್ತವನ್ನು ಮಕ್ಕಳ ಪೋಷಕರಿಂದ ಸಂಗ್ರಹಿಸಿದ್ದಾರೆ.