
ಚನ್ನಮ್ಮನ ಕಿತ್ತೂರು, ಅಕ್ಟೋಬರ್ 25: ಕರ್ನಾಟಕ ಹೆಸರಿಗೆ 100 ವರ್ಷ ತುಂಬುವ ಹೊತ್ತಲ್ಲಿ ಏಕೀಕರಣಕ್ಕೆ 80 ವರ್ಷ ತುಂಬುವ ಹೊತ್ತಲ್ಲಿ ರಾಣಿ ಚನ್ನಮ್ಮಾಜಿ ವಿಜಯೋತ್ಸವ ಜರುಗುತ್ತಿರುವುದು ಅಭಿಮಾನದ ಸಂಗತಿಯಾಗಿದೆ ಎಂದರು ಪುರುಷೋತ್ತಮ ಬಿಳಿಮಲೆ
ಬೀದರದಿಂದ ಚಾಮರಾಜನಗರಜವರೆಗೂ ಸಂಚರಿಸಿ ಜನಾನುರಾಗಿ ಕಾರ್ಯಗಳ ಮೂಲಕ ಕನ್ನಡದ ಬಗ್ಗೆ ಅಪಾರ ಕಾಳಜಿಯನ್ನಿಟ್ಟುಕೊಂಡು ಜನಪರ ಕೆಲಸಗಳು ಮಾಡುತ್ತಿರುವ ಮುಖ್ಯಮಂತ್ರಿ ಈ ನಾಡಿಗೆ ದೊರೆತಿದೆ ನಮ್ಮ ಹೆಮ್ಮೆ ಎಂದರು.
ಆರು ತಿಂಗಳಿಗೆ ಫೆಲೋಶಿಫ್ ನೀಡುತ್ತಿದ್ದು ಬಳ್ಳಾರಿ ಗೌರಮ್ಮ ಬೆಳವಾಡಿ ಮಲ್ಲಮ್ಮ ಚನ್ನಮ್ಮ ಕಾರ್ನಾಡ ಸದಾಶಿವರಾಯರು ಮೊಜಲಾದವರನ್ನು ಕುರಿತಾದ ಸ್ಥಳೀಯ ಅಧ್ಯಯನ ಮಾಡಲು ಕರ್ನಾಟಕದಿಂದ ಯುವಜನರು 17 ಸಾವಿರ ಯೋಜನೆಗಳಿದ್ದವು. ಅವುಗಳಲ್ಲಿ ಯಾವುದು ಉಪಯೋಗಕ್ಕೆ ಬಾರಜ ಯೋಓನೆಗಳಿದ್ಜವು. ಇಂದಿನ ಹೊಸತಲೆಮಾರು ನಿಜವಾದ ಇತಿಹಾಸಕ್ಕೆ ಮುಖಾಮುಖಿಯಾಗದೇ ಇರುವುದು ದುರಂತ ಹೀಗಾಗಿ ಇತಿಹಾಸದ ಅರಿವು ಬಿತ್ತುವ ಕೆಲಸಗಳಾಗಬೇಕಿದೆ ಎಂದರು.
1857 ರಿ ಮೊದಲ ಸ್ವಾತಂತ್ರ್ಯ ಸಂಗ್ರಾಮದ ಬಹದ್ದೂರಶಾ ಜಾಫರ ಗಿಂತಲೂ ಮುಂಚೆ ನಡೆದ ಕಿತ್ತೂರು ಹೋರಾಟನೆನೆಯಬೇಕಿದೆ.ದತ್ತು ಮಕ್ಕಳಿಗೆ ಹಕ್ಕಿಲ್ಲ ಅನ್ನೋದು ಮೊಜಲ ಬಾರಿ ಅನುಷ್ಠಾನಗೊಂಡಿದ್ದು ಕಿತ್ತೂರಲ್ಲಿ ಹೀಗಾಗಿ ಇತಿಹಾಸದಲ್ಲಿ ಕಿತ್ತೂರು ಸದಾ ಚಿರಾಯುವಾಗಿ ಇರಲಿದೆ. ಮೊಟ್ಟ ಮೊದಲ ಶಸ್ತ್ರಾಸ್ತ್ರ ಹಿಡಿದ ಮಹಿಳೆ ಅನ್ನೋದು ಹಿರಿಮೆ ಎಂದರು.
ಚನ್ನಮ್ಮ ರಾಯಣ್ಣ ಹಡಗಲಿ ಬೇಡರ ಬಗ್ಗೆ ಲಾವಣಿಗಳಿವೆ ಕೃಷ್ಣದೇವರಾಯ, ಪುಲಿಕೇಶಿ, ನೃಪತುಂಗ ಇವರ ಮೇಲೆ ಲಾವಣಿಗಳಿಲ್ಲ ಜನಗಳ ಮಧ್ಯೆ ರಾಜರು ಇದ್ಜಾಗ ಮಾತ್ರ ಲಾವಣಿಗಳು ಹುಟ್ಟಿಕೊಳ್ಳುತ್ತವೆ ಹೀಗಾಗಿ ಚನ್ನಮ್ಮನ ಬಗ್ಗೆ ಹೊಸ ರೂಪದಲ್ಲಿ ಇತಿಹಾಸವನ್ನು ಕಟ್ಟುವ ಅಗತ್ಯವಿದೆ. ಹೋರಾಟಗಾರಿಗೆ ಅನ್ನ ಕೊಟ್ಟವರು ಕೂಡ ಹೋರಾಟಗಾರರು ನೇಣಿಗೆ ಶರಣಾದವರು ಮಾತ್ರ ಹೋರಾಟಗಾರರಲ್ಲ ತನ್ನ ಒಬ್ಬನೇ ಮಗ ಇದ್ದರೂ ಆತನನ್ನು ಹೋರಾಟಕ್ಕೆ ಧುಮುಕಿದರಲ್ಲ ಆ ತಾಯಂದಿರು ಕೂಡ ಹೋರಾಟಗಾರರೇ.ಈ ನಿಟ್ಟಿನಲ್ಲಿ ನೈಜ ಇತಿಹಾಸದ ಆಸಕ್ತಿಯನ್ನು ಇಂದಿನ ಯುವ ಪೀಳಿಗೆಗೆ ತಲುಪಿಸುವ ಅವಶ್ಯಕತೆ ಇದೆ ಎಂದರು.