
ಮಂಡ್ಯ, ನವೆಂಬರ್ 25: ಕಾಂಗ್ರೆಸ್ನವರು ಮೂರು ಬೈ ಎಲೆಕ್ಷನ್ನಲ್ಲಿ ಗೆದ್ದಿದ್ದೇವೆ ಎಂದು ಬೀಗುತ್ತಿದ್ದಾರೆ. ಇದು ತಾತ್ಕಾಲಿಕ ಅಷ್ಟೇ ಎಂದಿದ್ದಾರೆ ವಿಪಕ್ಷ ನಾಯಕ ಆರ್. ಅಶೋಕ್.
ನಮ್ಮ ಸರ್ಕಾರ ಹಿಂದೆ ಮೂರು ವರ್ಷ ಆಡಳಿತದಲ್ಲಿದ್ದಾಗ, ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ನಾವು 18 ಬೈ ಎಲೆಕ್ಷನ್ ಗೆದ್ದಿದ್ದೇವೆ ಎಂದಿದ್ದಾರೆ.
ಜನರಲ್ ಎಲೆಕ್ಷನ್ನಲ್ಲಿ ನಾವು ಸೋತಿದ್ದೆವು. 3 ಎಲೆಕ್ಷನ್ ಗೆದ್ದು ಇವರು ಹೀಗೆ ಮೆರೆಯುತ್ತಿದ್ದರಲ್ವಾ? ಇನ್ನು 18 ಬೈ ಎಲೆಕ್ಷನ್ ಗೆದ್ದಿದ್ದ ನಾವು ಹೇಗೆ ಮೆರೆಯಬೇಕು? ಎಂದು ಪ್ರತಿಪಕ್ಷದ ನಾಯಕ ಆರ್. ಅಶೋಕ್ ಪ್ರಶ್ನಿಸಿದ್ದಾರೆ.
ಪಕ್ಷ ಬಲವರ್ಧನೆಗೆ ಮಂಡ್ಯದಲ್ಲಿ ಬೃಹತ್ ಕಾರ್ಯಕರ್ತರ ಸಭೆ ಏರ್ಪಡಿಸಲಾಗಿತ್ತು. ಶ್ರೀರಂಗಪಟ್ಟಣ ವಿಧಾನಸಭಾ ಕ್ಷೇತ್ರದ ಮಂಡ್ಯ ತಾಲೂಕು ತಗ್ಗಹಳ್ಳಿಯಲ್ಲಿ ಕಾರ್ಯಕರ್ತರ ಸಭೆ ಹಾಗೂ ಅಭಿನಂದನಾ ಸಮಾರಂಭವನ್ನು ಉದ್ಘಾಟಿಸಿ ವಿಪಕ್ಷ ನಾಯಕ ಆರ್. ಅಶೋಕ್ ಮಾತನಾಡಿದರು.
ಈ ಚುನಾವಣೆ ಸಿದ್ದರಾಮಯ್ಯ, ಡಿಕೆಶಿ ಅವರ ಚುನಾವಣೆಯಲ್ಲ. ಇದು ಕಟ್ರಾಂಕ್ಟರ್ಗಳದ್ದು, ಹಣದ ಚುನಾವಣೆ ಎಂದರು.