
ಚನ್ನಮ್ಮನ ಕಿತ್ತೂರು, ನವೆಂಬರ್ 11: ಗುಂಡೇನಟ್ಟಿ ಗ್ರಾಮದ ಶಂಕರ ಲಂಗಟಿ ಅವರ ತೋಟದಲ್ಲಿ ಇಂದು 110 ಕ್ಕೂ ಹೆಚ್ಚು ದೇಶಿ ಭತ್ತದ ತಳಿಗಳ ಕ್ಷೇತ್ರೋತ್ಸವವು ನಡೆಯಿತು.
ಈ ಸಂದರ್ಭದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ಶಂಕರ ಲಂಗಟಿ ಅವರು 110 ತಳಿಗಳ ಸಂರಕ್ಷಣೆಯ ಹಿಂದಿನ ಶ್ರಮ ಮತ್ತು ಬತ್ತದ ತಳಿಗಳ ಉಳಿವಿನ ಮಹತ್ವವನ್ನು ವಿವರಿಸಿದರು.
ಕಾರ್ಯಕ್ರಮದಲ್ಲಿ ಪಿ. ಎಲ್. ಪಾಟೀಲ, ಕೃಷಿ ವಿಶ್ವವಿದ್ಯಾಲಯ ಧಾರವಾಡದ ಪ್ರತಿನಿಧಿಯಾಗಿ ಭಾಗವಹಿಸಿದರು. ಅವರು ಶಂಕರ ಲಂಗಟಿ ಅವರ ಶ್ರಮದ ಕಾರ್ಯ ಮತ್ತು ವಿವಿಧ ನಿಸರ್ಗದತ್ತ ಬಣ್ಣದ ಅಕ್ಕಿಗಳ ಸಂರಕ್ಷಣೆಯ ಪ್ರಾಮುಖ್ಯತೆಯನ್ನು ಶ್ರೋತೃಗಳಿಗೆ ವಿವರಿಸಿದರು.
ಕಾರ್ಯಕ್ರಮದ ಮತ್ತೊಂದು ಮಹತ್ವದ ಭಾಗವಾಗಿ, ಶಿವನಗೌಡ ಪಾಟೀಲ, ಕೃಷಿ ಇಲಾಖೆ ಬೆಳಗಾವಿ ಉಪನಿರ್ದೇಶಕರು, ತಮ್ಮ ಭಾಷಣದಲ್ಲಿ ಕೃಷಿ ಕ್ಷೇತ್ರದ ಮಹತ್ವದ ಬಗ್ಗೆ ಮನನೆ ಮಾಡಿದರು.