ಪರಸ್ಪರ ಪ್ರೀತಿಯೇ ನಾಯಕರಿಗೆ ಸಲ್ಲಿಸುವ ಗೌರವವಾಗಿದೆ: ಸಿಎಂ ಸಿದ್ದರಾಮಯ್ಯ
ಚನ್ನಮ್ಮನ ಕಿತ್ತೂರು: ರಾಣಿ ಚನ್ನಮ್ಮನ 200 ನೇ ವಿಜಯೋತ್ಸವದ ಸಂಭ್ರಮಾಚರಣೆಯ ಪ್ರಯುಕ್ತ ಕಿತ್ತೂರು ಉತ್ಸವದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಸಿಎಂ ಸಿದ್ದರಾಮಯ್ಯ ಚನ್ನಮ್ಮಾಜಿ, ಬುದ್ದ, ಬಸವ ಮತ್ತು ಅಂಬೇಡ್ಕರ್ ಅವರ ಆಶಯವೇ ಸಮಸಮಾಜ ನಿರ್ಮಾಣ ಹೀಗಾಗಿ ಪರಸ್ಪರ ನಾವುಗಳು ಪ್ರೀತಿಸುವುದೇ ಅವರಿಗೆ ಸಲ್ಲಿಸುವ ಗೌರವವಾಗಿದೆ ಎಂದರು. ಕಿತ್ತೂರು ಸಂಸ್ಥಾನ ಆಳಿದ ಚನ್ನಮ್ಮ ವೀರ ಮಹಿಳೆ ಬ್ರಿಟಿಷ್ ವಿರುದ್ದ ಅವರು ಮಾಡಿದ ದತ್ತು ಮಕ್ಕಳಿಗೆ ಹಕ್ಕಿಲ್ಲ ಕಾನೂನು ಧಿಕ್ಕರಿಸಿ ಕಪ್ಪ ಕಾಣಿಕೆ ನೀಡೋದಿಲ್ಲ ಅಂತ ಹೋರಾಟ ಮಾಡಿದ ಮೊಟ್ಟ ಮೊದಲ ಯುದ್ದ ಸಾರಿ ವಿಜಯ ಸಾಧಿಸಿದ ದಿಟ್ಟ ರಾಣಿ.
200 ವರ್ಷದ ವಿಜಯೋತ್ಸವಕ್ಕೆ ಸ್ಥಳೀಯ ಶಾಸಕರ ಮನವಿ ಮೇರೆಗೆ ಅದ್ದೂರಿ ಆಚರಣೆಗೆ ಅನುದಾನ ನೀಡಿದ್ದೇನೆ.
ಈಗ ಹಿಂದೆ ಸರ್ಕಾರದಿಂದ ಚನ್ನಮ್ಮನ ಜಯಂತಿಯನ್ನು ಸರ್ಕಾರದ ಮಟ್ಟದಲ್ಲಿ ಆಚರಿಸಲು ಆದೇಶ ಮಾಡಿದ್ದು ಸಿದ್ದರಾಮಯ್ಯನವರ ನೇತೃತ್ವದ ಕಾಂಗ್ರೆಸ್ ಸರ್ಕಾರ. ಈ ಹಿಂದಿನ ಯಾವ ಸರ್ಕಾರವೂ ಇಂತಹ ನಿರ್ದಾರ ತೆಗೆದುಕೊಂಡಿರಲಿಲ್ಲ ನನಗೆ ವೈಯಕ್ತಿಕವಾಗಿ ಚನ್ನಮ್ಮನ ಮೇಲೆ ಅಪಾರ ಅಭಿಮಾನವಿದೆ. ಅಮಟೂರ ಬಾಳಪ್ಪ ಮತ್ತು ಸಂಗೊಳ್ಳಿ ರಾಯಣ್ಣ ಚನ್ನಮ್ಮನ ಜೊತೆಗೆ ಎದೆಗೆ ಎದೆ ಕೊಟ್ಟು ಹೋರಾಡಿದವರು ಅವರ ಸ್ಮರಣೆ ನಿಜಕ್ಕೂ ಅಗತ್ಯವಿದೆ. ಈ ದೇಶ ಮತ್ತು ದೇಶದ ಜನರನ್ನು ದ್ವೇಷಿಸಬಾರದು ಜಾತಿ ಧರ್ಮ ಸಂಸ್ಕೃತಿ ಯಾವುದೇ ಇರಲಿ ಅವರನ್ನೆಲ್ಲ ಭಾರತೀಯರೆಂದೇ ತಿಳಿದು ಮನುಷ್ಯ ಮನುಷ್ಯನನ್ನು ಪರಸ್ಪರ ಪ್ರೀತಿಸಬೇಕು ದ್ವೇಷ ಮಾಡಕೂಡದು. ಹುಟ್ಟುತ್ತಾ ವಿಶ್ವಮಾನವರಾಗಿ ಬೆಳೆಯುತ್ತ ಅಲ್ಪಮಾನವರಾಗುತ್ತಾರೆ ಅನ್ನೋ ಕುವೆಂಪು ಅವರ ಸಂದೇಶವನ್ನು ಅರ್ಥ ಮಾಡಿಕೊಂಡು ನಾವೇಲ್ಲ ವಿಶ್ವಮಾನವರಾಗುವತ್ತ ಹೆಜ್ಜೆ ಹಾಕಬೇಕು.
ದೇಶದ ಸ್ವಾತಂತ್ರ್ಯಕ್ಕೆ ಅನೇಕ ನಾಯಕರ ತ್ಯಾಗ ಬಲಿದಾನವಾಗಿದೆ. ಸಮ ಸಮಾಜದ ಕಲ್ಪನೆಯೇ ಬಸವಣ್ಣನ ಕನಸಾಗಿತ್ತು ಧರ್ಮ ಸಿದ್ದಾಂತ ವಿರೋಧಿಸಿ ಮೌಢ್ಯ ಕಂದಾಚಾರಗಳನ್ನು ತಿರಸ್ಕರಿಸುವುದೇ ಬಸವಣ್ಣನವರ ಆಶಯ ಹೀಗಾಗಿ ಬಸವಣ್ಣನವರನ್ನು ಸಾಂಸ್ಕೃತಿಕ ನಾಯಕರನ್ನಾಗಿ ನಮ್ಮ ಸರ್ಕಾರ ಘೋಷಿಸಿದೆ. ಜನ ಮೆಚ್ಚಿಸಲು ಈ ಘೋಷಣೆ ಮಾಡದೇ ಅವರ ವಿಚಾರಗಳು ಈವತ್ತಿಗೂ ಪ್ರಸ್ತುತ ಹೀಗಾಗಿ ನಮ್ಮ ಸರ್ಕಾರ ಬುದ್ದ ಬಸವ ಅಂಬೇಡ್ಕರ್ ಅವರ ಆಶಯಗಳಿಗೆ ಬದ್ದವಾಗಿದೆ. ಅಧಿಕಾರದ ಮೂಲಕ ಬದಲಾವಣೆ ಸಾಧ್ಯ ಜಾತಿ ವ್ಯವಸ್ಥೆ ಹೋಗಲಾಡಿಸಲು ಅಧಿಕಾರ ಅವಶ್ಯ. ಇವನಾರವ ಇವ ನಮ್ಮವ ಎಂದು ಬಸವಣ್ಣ ಹೇಳಿದ್ದರು ಅಂತರ ಜಾತಿ ವಿವಾಹ ಕೂಡ ಸಮ ಸಮಾಜ ನಿರ್ಮಾಣಕ್ಕೆ ಪೂರಕವಾಗಿದೆ.
ಪಂಚ ಗ್ಯಾರಂಟಿಗಳ ಮೂಲಕ ಸಮಾಜದ ಸರ್ವರಿಗೂ ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲು ಅನುಕೂಲವಾಗಲಿದೆ. ಜನರನ್ನು ಸಮಾಜವನ್ನು ಪರಸ್ಪರ ಪ್ರೀತಿಸಿದರೆ ಅದೇ ನಮ್ಮ ನಾಯಕರಿಗೆ ಸಲ್ಲಿಸುವ ಗೌರವವಾಗಲಿದೆ ಎಂದರು.

ಪ್ರಾಸ್ತಾವಿಕವಾಗಿ ಶಾಸಕ ಬಾಬಾಸಾಹೇಬ ಪಾಟೀಲ ಮಾತನಾಡಿ ಬ್ರಿಟಿಷರಿಗೆ ಮೊಟ್ಟ ಮೊದಲ ಬಾರಿಗೆ ಸೋಲಿನ ರುಚಿಯುಣಿಸಿದ ಕೀರ್ತಿ ಕಿತ್ತೂರಿಗೆ ಸಲ್ಲುತ್ತದೆ ಅಂತ ದಿಟ್ಟ ರಾಣಿ ಚನ್ನಮ್ಮಾಜಿ 1824 ರ ಮೊದಲ ಸ್ವಾತಂತ್ರ್ಯ ಸಂಗ್ರಾಮದ ವಿಜಯೋತ್ಸವದ ಪ್ರತೀಕವಾಗಿ ಈ ಉತ್ಸವವನ್ನು ಆಯೋಜಿಸುತ್ತ ಬರಲಾಗಿದೆ. ಕೋಟಿ ನಿರ್ಲಕ್ಷ್ಯತೆಯ ಬಗ್ಗೆ ವಿಶೇಷ ಕಾಳಜಿ ವಹಿಸಿ ಮಾನ್ಯ ಮುಖ್ಯಮಂತ್ರಿಗಳು 50 ಕೋಟಿ ಅನುದಾನ ಒದಗಿಸಿ ಕೋಟೆ ಅಭಿವೃದ್ಧಿಗೆ ಬದ್ದರಾಗಿರುವುದಾಗಿ ಪುನಶ್ಚೇತನ ಕಾರ್ಯಕ್ಕೆ ಪ್ರವಾಸೋದ್ಯಮ ಹಿನ್ನೆಲೆಯಲ್ಲಿ ಆಕರ್ಷಣೆಯ ಕಾರಣ ಇನ್ನೂ ಹಂತ ಹಂತವಾಗಿ ಕ್ಷೇತ್ರಾಭಿವೃದ್ದಿ ದೃಷ್ಟಿಯಿಂದ ಏತ ನೀರಾವರಿ ಯೋಜನೆಗೆ ಅನುದಾನ ನೀಡಿದ್ದಾರೆ ಕೆರೆ ತುಂಬುವ ಕಾಮಗಾರಿ ಬಹುತೇಕ ಪೂರ್ಣಗೊಂಡಿವೆ ಇನ್ನೂ ಹೊಸ ಪ್ರಸ್ತಾವನೆ ಸಲ್ಲಿಸಲಾಗಿದೆ ಮಾನ್ಯರು ಅದಕ್ಕೆ ಸಮ್ಮತಿ ಸೂಚಿಸಿದ್ದಾರೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಅಡಿಯಲ್ಲಿ ಒಂದು ಶಾಲೆ ನಿರ್ಮಾಣಕ್ಕೆ ಅನುದಾನ ಒದಗಿಸಿದ್ದಾರೆ ಲೋಕೋಪಯೋಗಿ ಇಲಾಖೆಯಿಂದಲೂ ಕೂಡ ಸಾಕಷ್ಟು ಅನುದಾನ ಒದಗಿಸಿದ್ದಾರೆ.
ರೈತರ ಈ ಭಾಗದ ಜೀವನಾಡಿಯಾದ ಮಲಪ್ರಭಾ ಕಾರ್ಖಾನೆ ಪುನಶ್ಚೇತನಕ್ಕೆ ಸರ್ಕಾರ ಕೈ ಹಿಡಿದೆತ್ತುವ ಕೆಲಸ ಮಾಡಬೇಕಿದೆ ರೈತರ ಬಾಳು ಹಸನು ಮಾಡಬೇಕು ಅಂತ ಮನವಿ ಮಾಡಿದರು.
ಈಗಾಗಲೇ ಥೀಮ್ ಪಾರ್ಕ ಸೇರಿದಂತೆ ಹಲವು ಕಾಮಗಾರಿಗೆ ಅನುದಾನ ನೀಡಿದ್ದಾರೆ. ಇನ್ನೂ ಅನುದಾನ ಕೊಡುವ ಭರವಸೆ ನೀಡಿದ್ದಾರೆ ಎಂದರು.
ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವ ಶಿವರಾಜ ತಂಗಡಗಿ ಅವರು ಮಾತನಾಡಿ ಮಾನ್ಯ ಮುಖ್ಯಮಂತ್ರಿಗಳು ಮಾತು ಕೊಟ್ಟಂತೆ ಸಮಾರೋಪ ಕಾರ್ಯಕ್ರಮಕ್ಕೆ ಆಗಮಿಸಿದ್ದಾರೆ ಚನ್ನಮ್ಮಾಜಿಗೆ ಗೌರವ ಕೊಟ್ಟಿರುವ ನಾಯಕರು ನಮ್ಮ ಮುಖ್ಯಮಂತ್ರಿಗಳು ಚನ್ನಮ್ಮನ ಇತಿಹಾಸ ಬಹಳ ರೋಚಕವಾದದ್ದು ಬ್ರಿಟಿಷ್ ವಿರುದ್ದ ಸಮರ ಸಾರಿದ ದಿಟ್ಟ ಮಹಿಳೆ. ಉತ್ಸವದ ಮೂಲಕ ಇತಿಹಾಸವನ್ನು ಮೆಲುಕು ಹಾಕಬೇಕಿದೆ. ಯುವಪೀಳಿಗೆಗೆ ಸಂದೇಶ ಕೊಡಬೇಕಿದೆ. ಸ್ಥಳೀಯ ಶಾಸಕರು ಅಭಿವೃದ್ಧಿಗೆ ದುಂಬಾಲು ಬೀಳುವ ನಾಯಕರು ಹಿಂದುಳಿದ ವರ್ಗದ ಶಾಲೆಗಳ ಅಭಿವೃದ್ಧಿಗೆ ರೂ 25 ಕೋಟಿ ಅನುದಾನ ನೀಡಿದ್ದಾರೆ. ಐದು ಗ್ಯಾರಂಟಿಗಳ ಮೂಲಕ ಸಮಾಜದ ಸಮಗ್ರ ಅಭಿವೃದ್ಧಿಗೆ ಕೊಡುಗೆ ನೀಡಿದ್ದಾರೆ. ಕಳೆದ ಬಾರಿ ಉತ್ಸವಕ್ಕೆ ಬರಲು ಆಗಲಿಲ್ಲ ಈ ಬಾರಿ ಬಂದಿದ್ದಕ್ಕೆ ನನಗೆ ತುಂಬ ಸಂತೋಷವೆನಿಸುತ್ತದೆ ಎಂದರು.
ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪುರುಷೋತ್ತಮ ಬಿಳಿಮಲೆ ಅವರು ಮಾತನಾಡಿ ಕರ್ನಾಟಕ ಹೆಸರಿಗೆ 100 ವರ್ಷ ತುಂಬುವ ಹೊತ್ತಲ್ಲಿ ಏಕೀಕರಣಕ್ಕೆ 80 ವರ್ಷ ತುಂಬುವ ಹೊತ್ತಲ್ಲಿ ರಾಣಿ ಚನ್ನಮ್ಮಾಜಿ ವಿಜಯೋತ್ಸವ ಜರುಗುತ್ತಿರುವುದು ಅಭಿಮಾನದ ಸಂಗತಿಯಾಗಿದೆ. ಬೀದರದಿಂದ ಚಾಮರಾಜನಗರಜವರೆಗೂ ಸಂಚರಿಸಿ ಜನಾನುರಾಗಿ ಕಾರ್ಯಗಳ ಮೂಲಕ ಕನ್ನಡದ ಬಗ್ಗೆ ಅಪಾರ ಕಾಳಜಿಯನ್ನಿಟ್ಟುಕೊಂಡು ಜನಪರ ಕೆಲಸಗಳು ಮಾಡುತ್ತಿರುವ ಮುಖ್ಯಮಂತ್ರಿ ಈ ನಾಡಿಗೆ ದೊರೆತಿದ್ದು ನಮ್ಮ ಹೆಮ್ಮೆ.
ಆರು ತಿಂಗಳಿಗೆ ಫೆಲೋಶಿಫ್ ನೀಡುತ್ತಿದ್ದು ಬಳ್ಳಾರಿ ಗೌರಮ್ಮ, ಬೆಳವಡಿ ಮಲ್ಲಮ್ಮ, ಚನ್ನಮ್ಮ ಕಾರ್ನಾಡ ಸದಾಶಿವರಾಯರು ಮೊದಲಾದವರನ್ನು ಕುರಿತಾದ ಸ್ಥಳೀಯ ಅಧ್ಯಯನ ಮಾಡಲು ಕರ್ನಾಟಕ ಯುವಜನರು 17 ಸಾವಿರ ಯೋಜನೆಗಳಿದ್ದವು. ಅವುಗಳಲ್ಲಿ ಯಾವುದು ಉಪಯೋಗಕ್ಕೆ ಬಾರದ ಯೋಜನೆಗಳಿದ್ದವು. ಇಂದಿನ ಹೊಸ ತಲೆಮಾರು ನಿಜವಾದ ಇತಿಹಾಸಕ್ಕೆ ಮುಖಾಮುಖಿಯಾಗದೇ ಇರುವುದು ದುರಂತ ಹೀಗಾಗಿ ಇತಿಹಾಸದ ಅರಿವು ಬಿತ್ತುವ ಕೆಲಸಗಳಾಗಬೇಕಿದೆ. 1857 ರ ಮೊದಲ ಸ್ವಾತಂತ್ರ್ಯ ಸಂಗ್ರಾಮದ ಬಹದ್ದೂರ ಶಾ ಜಾಫರಗಿಂತಲೂ ಮುಂಚೆ ನಡೆದ ಕಿತ್ತೂರು ಹೋರಾಟ ನೆನೆಯಬೇಕಿದೆ.
ದತ್ತು ಮಕ್ಕಳಿಗೆ ಹಕ್ಕಿಲ್ಲ ಅನ್ನೋದು ಮೊದಲ ಬಾರಿ ಅನುಷ್ಠಾನಗೊಂಡಿದ್ದು ಕಿತ್ತೂರಲ್ಲಿ ಹೀಗಾಗಿ ಇತಿಹಾಸದಲ್ಲಿ ಕಿತ್ತೂರು ಸದಾ ಚಿರಾಯುವಾಗಿ ಇರಲಿದೆ. ಮೊಟ್ಟ ಮೊದಲ ಶಸ್ತ್ರಾಸ್ತ್ರ ಹಿಡಿದ ಮಹಿಳೆ ಅನ್ನೋದು ಹಿರಿಮೆ. ಚನ್ನಮ್ಮ ರಾಯಣ್ಣ, ಹಾಗೂ ಹಡಗಲಿ ಬೇಡರ ಬಗ್ಗೆ ಲಾವಣಿಗಳಿವೆ, ಕೃಷ್ಣದೇವರಾಯ, ಪುಲಿಕೇಶಿ, ನೃಪತುಂಗ ಇವರ ಮೇಲೆ ಲಾವಣಿಗಳಿಲ್ಲ ಜನಗಳ ಮಧ್ಯೆ ರಾಜರು ಇದ್ಜಾಗ ಮಾತ್ರ ಲಾವಣಿಗಳು ಹುಟ್ಟಿಕೊಳ್ಳುತ್ತವೆ ಹೀಗಾಗಿ ಚನ್ನಮ್ಮನ ಬಗ್ಗೆ ಹೊಸ ರೂಪದಲ್ಲಿ ಇತಿಹಾಸವನ್ನು ಕಟ್ಟುವ ಅಗತ್ಯವಿದೆ.
ಹೋರಾಟಗಾರಿಗೆ ಅನ್ನ ಕೊಟ್ಟವರು ಕೂಡ ಹೋರಾಟಗಾರರು ನೇಣಿಗೆ ಶರಣಾದವರು ಮಾತ್ರ ಹೋರಾಟಗಾರರಲ್ಲ ತನ್ನ ಒಬ್ಬನೇ ಮಗ ಇದ್ದರೂ ಆತನನ್ನು ಹೋರಾಟಕ್ಕೆ ಧುಮುಕಿದರಲ್ಲ ಆ ತಾಯಂದಿರು ಕೂಡ ಹೋರಾಟಗಾರರೆ ಎಂದರು.

ಲಿಂಗಾಯತ ಪಂಚಮಸಾಲಿ ಜಗದ್ಗುರು ಪೀಠದ ಶ್ರೀ ಬಸವ ಜಯ ಮೃತ್ಯುಂಜಯ ಮಹಾಸ್ವಾಮಿಗಳು ಮಾತನಾಡಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಿತ್ತೂರು ನಾಡಿಗೆ ಬಂದುರವುದು ಸಂಗೊಳ್ಳಿ ರಾಯಣ್ಣ ಬಂದಷ್ಟೇ ಸಂತೋಷವಾಗಿದೆ. ಇಂಗ್ಲೇಂಡ ದೇಶದಲ್ಲಿರುವ ರಾಣಿ ಚನ್ನಮ್ಮನವರ ಮತ್ತು ಸಂಗೊಳ್ಳಿ ರಾಯಣ್ಣನವರ ಖಡ್ಗಗಳನ್ನು ನಮ್ಮ ನಾಡಿಗೆ ತೆಗೆದುಕೊಂಡು ಬರುವ ಕೆಲಸವಾಗಬೇಕು ಎಂದ ಅವರು ಕಿತ್ತೂರು ಸ್ಮಾರಕಗಳನ್ನು ಅಂತರಾಷ್ಟ್ರೀಯ ಸ್ಮಾರಕಗಳನ್ನಾಗಿ ಮಾಡಬೇಕು ಎಂದು ಆಗ್ರಹ ಮಾಡಿದರು.
ದಿವ್ಯ ಸಾನಿದ್ಯ ವಹಿಸಿದ ಕಿತ್ತೂರು ರಾಜಗುರು ಕಲ್ಮಠದ ಶ್ರೀ ಮಡಿವಾಳ ರಾಜಯೋಗೀಂದ್ರ ಸ್ವಾಮಿಜೀಯವರು ಆಶಿರ್ವಚನ ನೀಡುತ್ತ ಮಾತನಾಡಿ 200 ನೇವಿಜಯೋತ್ಸವದ ಕಿತ್ತೂರು ಉತ್ಸವ ಈ ಬಾರಿ ಅದ್ದೂರಿಯಾಗಿ ಜರುಗಿದ್ದು ಸನ್ಮಾನ್ಯ ಸಿದ್ದರಾಮಯ್ಯ ಅವರು ಈ ಬಾರಿ ಕಿತ್ತೂರು ಉತ್ಸವಕ್ಕೆ ಹೆಚ್ಚಿನ ಅನುದಾನ ನೀಡಿದ್ದು ರಾಣಿ ಚನ್ನಮ್ಮಾಜಿಯ ಮೇಲೆ ಅವರಿಟ್ಟ ಪ್ರೀತಿಯನ್ನು ಎತ್ತಿ ತೋರಿಸಿದೆ. ಸ್ಛಳೀಯ ಶಾಸಕ ಬಾಬಾಸಾಹೇಬ ಪಾಟೀಲ ಅವರ ವಿಶೇಷ ಪ್ರಯತ್ನವನ್ನು ಕೊಂಡಾಡಿದ ಶ್ರೀಗಳು ಚನ್ನಮ್ಮ ಸದಾ ಸ್ಮರಣೀಯಳಾಗಿದ್ದು ಈ ನಿಟ್ಟಿನಲ್ಲಿ ಸರ್ಕಾರ ಹಂತ ಹಂತವಾಗಿ ಅಭಿವೃದ್ಧಿ ಕೈಗೊಳ್ಳಲಿ ಎಂದು ಆಶಿರ್ವದಿಸಿದರು.
ನಿಚ್ಚಣಕಿ ಶ್ರೀ ಗುರು ಮಡಿವಾಳೇಶ್ವರ ಮಠದ ಪಂಚಾಕ್ಷರಿ ಶ್ರೀಗಳು ಸಾನಿಧ್ಯ ವಹಿಸಿ ಮಾತನಾಡಿ ಹೊಂಡದ ಬಸವೇಶ್ವರ ದೇವಸ್ಥಾನದ ಶಿಲಾ ಶಾಸನದಲ್ಲಿ ಕಿತ್ತೂರು 11ನೇ ಶತಮಾನದಲ್ಲಿತ್ತು ಎಂದು ಹೇಳಲಾಗುತ್ತಿದೆ. ಕಿತ್ತೂರು ಶಾಸನಗಳು ಗೋವಾ ಕದಂಬರ ಕಾಲದಿಂದಲೂ ಲಭ್ಯ ಇದ್ದು, ಅರಮನೆ ಗುರುಮನೆ ಪರಂಪರೆ ರಾಣಿಯರ ಪರಾಕ್ರಮ ಅವಲೋಕಿಸಿದಾಗ ಚನ್ನಮ್ಮಾಜಿ ಪ್ರಮುಖರಾಗಿದ್ದಾರೆ. ಶಿಕ್ಷಣ ಸಂಸ್ಥೆಗಳ ಕೊರತೆ ಕಿತ್ತೂರು ಪಟ್ಟಣದಲ್ಲಿದ್ದು ಇಲ್ಲಿನ ಮಕ್ಕಳು ಶಿಕ್ಷಣಕ್ಕಾಗಿ ದೂರದ ಪಟ್ಟಣಕ್ಕೆ ಹೋಗುವ ಅನಿವರ್ಯತೆ ಇದೆ ಹೀಗಾಗಿ ಈ ಭಾಗದಲ್ಲಿ ಶಿಕ್ಷಣಕ್ಕೆ ಪ್ರಾಮುಖ್ಯತೆ ನೀಡಬೇಕಾಗಿದೆ. ಗ್ಯಾರಂಟಿ ಅಬ್ಬರದ ನಡುವೆಯೂ ಸಿಎಂ ಸಿದ್ದರಾಮಯ್ಯ ಅವರು ಸಾಕಷ್ಟು ಅನುದಾನ ಕಿತ್ತೂರು ಅಭಿವೃದ್ದಿಗೆ ನೀಡಿದ್ದು ಶ್ಲಾಘನೀಯ. ಜಮಖಂಡಿಯಲ್ಲಿ ಚನ್ನಮ್ಮಾಜಿಯ ರಥದ ಗಾಲಿಗಳು ಇವೆ, ನಿಡಸೋಸಿ ಮಠದಲ್ಲಿ ಕೆಲವು ವಸ್ತುಗಳು ಲಭ್ಯವಿದ್ದು ಇವುಗಳನ್ನು ಪುನಃ ಕಿತ್ತೂರಿನ ಮ್ಯೂಸಿಯಂಗೆ ತರುವ ಕೆಲಸವಾಗಬೇಕು. ರಾಯಣ್ಣನಿಗೆ ಸಿಕ್ಕ ಪ್ರಾತಿನಿಧ್ಯ ಚನ್ನಮ್ಮಾಜಿಗೆ ಸಿಕ್ಕಿಲ್ಲ ಅನ್ನೋದು ವಾಸ್ತವ ಸತ್ಯ.ಇಷ್ಟರ ಮಟ್ಟಿಗಿನ ಅಭಿವೃದ್ಧಿ ಕಾಣೋದಕ್ಕೆ 200 ವರ್ಷ ಬೇಕಾಯಿತು. ಇದಕ್ಕಾಗಿ ತಂಡ ಕಟ್ಟಿಕೊಂಡು ಸಂಘಟನೆ ಮೂಲಕ ಹೋರಾಟ ಮಾಡುವ ಅವಶ್ಯವಿದೆ ಎಂದರು.
ಈ ವೇಳೆ ಮುಖ್ಯ ಸಚೇತಕರು ರಾಮದುರ್ಗ ಶಾಸಕರಾದ ಅಶೋಕ ಪಟ್ಟಣ, ರಾಜ್ಯ ಹಣಕಾಸು ಸಂಸ್ಥೆಯ ಅಧ್ಯಕ್ಷರು ಹಾಗೂ ಬೈಲಹೊಂಗಲ ಶಾಸಕ ಮಹಾಂತೇಶ ಕೌಜಲಗಿ, ಶಾಸಕರಾದ ಗಣೇಶ ಹುಕ್ಕೇರಿ, ವಿಶ್ವಾಸ ವೈದ್ಯ, ವಿಧಾನ ಪರಿಷತ ಸದಸ್ಯ ಹಣುಮಂತ ನಿರಾಣಿ, ಲಕ್ಷ್ಮಣರಾವ ಚಿಂಗಳೆ, ಜಿಲ್ಲಾಧಿಕಾರಿ ಮೊಹಮ್ಮದ ರೋಷನ, ಪೋಲಿಸ್ ವರಿಷ್ಠಾಧಿಕಾರಿ ಭೀಮಾಶಂಕರ ಗುಳೇದ, ಆಯುಕ್ತರು, ಕಿತ್ತೂರು ಅಭಿವೃದ್ಧಿ ಪ್ರಾಧಿಕಾರ ಹಾಗೂ ಉಪವಿಭಾಗಾಧಿಕಾರಿ ಪ್ರಭಾವತಿ ಫಕೀರಪೂರ, ಕಿತ್ತೂರು ದಂಡಾಧಿಕಾರಿ ರವೀಂದ್ರ ಹಾದಿಮನಿ, ಸೇರಿದಂತೆ ಅನೇಕರು ಇದ್ದರು.