Home ಸ್ಥಳೀಯ ಛಲ ಬಿಡದ ಛಲದಂಕ ಮಲ್ಲ ಚನ್ನಂಗಿ! ನೌಕರರ ಸಂಘಟನೆ ನಿರ್ದೇಶಕ ಸ್ಥಾನಕ್ಕೆ ಆಯ್ಕೆ!

ಛಲ ಬಿಡದ ಛಲದಂಕ ಮಲ್ಲ ಚನ್ನಂಗಿ! ನೌಕರರ ಸಂಘಟನೆ ನಿರ್ದೇಶಕ ಸ್ಥಾನಕ್ಕೆ ಆಯ್ಕೆ!

0
ಛಲ ಬಿಡದ ಛಲದಂಕ ಮಲ್ಲ ಚನ್ನಂಗಿ! ನೌಕರರ ಸಂಘಟನೆ ನಿರ್ದೇಶಕ ಸ್ಥಾನಕ್ಕೆ ಆಯ್ಕೆ!

ಚನ್ನಮ್ಮನ ಕಿತ್ತೂರು, ಅಕ್ಟೋಬರ್ 28: ತಾಲೂಕಿನ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ನಿರ್ದೇಶಕರ ಸ್ಥಾನಕ್ಕೆ ಇಂದು ನಡೆದ ಚುನಾವಣೆಯಲ್ಲಿ ಕಿತ್ತೂರು ಪಟ್ಟಣದ ಗುರುಸಿದ್ದೇಶ್ವರ ಬಾಲಕಿಯರ ಪ್ರೌಢಶಾಲೆಯ ಉಪ ಪ್ರಾಂಶುಪಾಲ ಮಹೇಶ ಚನ್ನಂಗಿ ಅಭೂತಪೂರ್ವ ಗೆಲುವು ಸಾಧಿಸಿದ್ದಾರೆ.

ಪ್ರೌಢಶಾಲಾ ವಿಭಾಗದ ಒಂದು ನಿರ್ದೇಶಕರ ಸ್ಥಾನಕ್ಕೆ ಮಹೇಶ ಚನ್ನಂಗಿ, ಶೇಖರ ಹಲಸಗಿ ಹಾಗೂ ಗಜಾನಂದ ಸೊಗಲನ್ನವರ‌ ಸೇರಿದಂತೆ ಮೂವರು ಚುನಾವಣಾ ಕಣದಲ್ಲಿ ಸ್ಪರ್ಧಿಸಿದ್ದರು. ಇಂದು ನಡೆದ ಚುನಾವಣೆಯಲ್ಲಿ ಮಹೇಶ ಚನ್ನಂಗಿ 44 ಮತಗಳನ್ನು ಪಡೆಯುವ ಮೂಲಕ ಗೆಲುವು ಸಾಧಿಸಿದ್ದಾರೆ.

ಈಗಾಗಲೇ ಪ್ರೌಢಶಾಲಾ ಮುಖ್ಯೋಪಾಧ್ಯಾಯರಾಗಿ ಬೈಲಹೊಂಗಲ ತಾಲೂಕಿನ ತುರಕರಶೀಗಿಹಳ್ಳಿ ಪ್ರೌಢಶಾಲೆಯಲ್ಲಿ ಒಂದು ದಶಕಕ್ಕೂ ಹೆಚ್ಚು ಕಾಲ ಸೇವೆ ಸಲ್ಲಿಸಿ ಇತ್ತೀಚೆಗಷ್ಟೇ ಚನ್ನಮ್ಮನ ಕಿತ್ತೂರು ತಾಲೂಕಿಗೆ ವರ್ಗಾವಣೆಯಾಗಿದ್ದಾರೆ.

ಪ್ರಸ್ತುತ ಜಿ.ಜಿ ಹೈಸ್ಕೂಲು ಉಪ ಪ್ರಾಂಶುಪಾಲರಾಗಿರುವ ಇವರು ರಾಣಿ ಚನ್ನಮ್ಮನ ಇತಿಹಾಸವನ್ನು ಕುರಿತು ಅಧ್ಯಯನ ಮಾಡಿ ತಮ್ಮ ಅದ್ಭುತ ಮಾತುಗಳ ಮೂಲಕ ನಾಡಿನ ಉದ್ದಗಲಕ್ಕೂ ಕಿತ್ತೂರು ಇತಿಹಾಸವನ್ನು ಕುರಿತು ಉಪನ್ಯಾಸ ನೀಡಿದ್ದಾರೆ. ಆ ಮೂಲಕ ಇತಿಹಾಸ ಸಂಶೋಧಕರಾಗಿ ಪ್ರಖರ ವಾಗ್ಮಿಯಾಗಿ ನಾಡಿಗೆ ಚಿರಪರಿಚಿತರಾಗಿದ್ದಾರೆ.

ಕೆ.ಎಲ್.ಇ ಸಪ್ತರ್ಷಿಗಳು ಮತ್ತು ಸಮಾಜಕ್ಕೆ ಅವರು ಕೊಡುಗೆಗಳ ಕುರಿತು ಬೆಳಗಾವಿ, ಧಾರವಾಡ, ಬೈಲಹೊಂಗಲ, ವಿಜಯಪುರ, ಕೂಡಲಸಂಗಮ, ಬಾಗಲಕೋಟ ಸೇರಿದಂತೆ ಹಲವಾರು ಮಹತ್ವದ ವೇದಿಕೆಗಳಲ್ಲಿ ಉಪನ್ಯಾಸ ನೀಡಿದ್ದಾರೆ.

ಐತಿಹಾಸಿಕ ನೈಜ ನಿಖರ ಅಧ್ಯಯನ ಮತ್ತು ಸಂಶೋಧನೆಗಳ ಮೂಲಕ ನಾಡಿನಾದ್ಯಂತ ಎಲೆ ಮರೆ ಕಾಯಿಯಂತಿರುವ ಉತ್ತರ ಕರ್ನಾಟಕದ ಅನೇಕ ಸ್ವಾಭಿಮಾನಿ ಸ್ವಾತಂತ್ರ್ಯ ಹೋರಾಟಗಾರರು, ಶಿಕ್ಷಣ ತಜ್ಞರು, ಲಿಂಗಾಯತ ಸಮುದಾಯದ ಉದಾತ್ತ ಚಿಂತಕರು, ಕನ್ನಡದ ನಾಡು ನುಡಿಗೆ ಶ್ರಮಿಸಿದ ಹೋರಾಟಗಾರರು ಸೇರಿದಂತೆ ಸಮಗ್ರ ಉತ್ತರ ಕರ್ನಾಟಕದ ಶೈಕ್ಷಣಿಕ, ಸಾಮಾಜಿಕ ಹಾಗೂ ಆರ್ಥಿಕ ಅಭಿವೃದ್ಧಿಗೆ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ವಿವರವಾದ ಭಾಷಣಗಳ ಮೂಲಕ ಇಡೀ ಉತ್ತರ ಕರ್ನಾಟಕದಾದ್ಯಂತ ಸ್ವಾಭಿಮಾನ ಬಿತ್ತುವ ಕೆಲಸ ಮಾಡಿದ್ದಾರೆ. ಇವರ ಅದ್ಭುತ ಮಾತುಗಳ ಮೂಲಕ ಕೇಳುಗರನ್ನು ಮೂಕವಿಸ್ಮಿತರನ್ನಾಗಿಸುವ ಇವರ ವಾಗ್ಜರಿಗೆ ಅನೇಕರು ಶ್ಲಾಘಿಸಿದ್ದು, ಈ ಭಾಗದ ಮಠಾಧೀಶರು, ಜನಪ್ರತಿನಿಧಿಗಳು, ಸಾಹಿತಿಗಳು ಅಲ್ಲದೇ ಶಿಕ್ಷಕರ ಪ್ರೀತಿಗೆ ಪಾತ್ರರಾಗಿದ್ದಾರೆ.

ನೌಕರರ ಸಂಘಟನೆಯ ಮೂಲಕ ಶಿಕ್ಷಕರ ಸೇವಾ ಸಂಬಂಧಿತ ನೋವು ಕಷ್ಟಗಳನ್ನು ಆಲಿಸಿ ಸರ್ಕಾರದ ಮಟ್ಟದಲ್ಲಿ ಗಮನ ಸೆಳೆದು ಶಿಕ್ಷಕರ ಗೌರವ ಹೆಚ್ಚಿಸುವ ನಿಟ್ಟಿನಲ್ಲಿ ಇವರ ಸೇವೆ ಇನ್ನೂ ಹೆಚ್ಚಾಗಿ ಈ ನಾಡಿಗೆ ದೊರಕಲಿ ಎಂದು ಶಿಕ್ಷಕರ ಬಳಗ ಶುಭ ಹಾರೈಸಿದೆ.

ಕರ್ನಾಟಕ ರಾಜ್ಯ ಸರ್ಕಾರಿ ನೌಕರ ಸಂಘ ಚೆನ್ನಮ್ಮನ ಕಿತ್ತೂರು ಘಟಕ ಪ್ರೌಢಶಾಲೆಗಳ ವಿಭಾಗ ಮತಕ್ಷೇತ್ರ ಏಳು ಇದಕ್ಕೆ ಇಂದು ನಡೆದ ಚುನಾವಣೆಯಲ್ಲಿ ಎಲ್ಲ ಶಿಕ್ಷಕರು ಮತ ನೀಡಿ ನನ್ನ ಗೆಲುವಿಗೆ ಕಾರಣೀಭೂತರಾಗಿದ್ದಾರೆ ಮತ ನೀಡಿದ ,ಬೆಂಬಲಿಸಿದ ಸ್ಪಂದಿಸಿದ ಪ್ರತ್ಯಕ್ಷವಾಗಿ ಪರೋಕ್ಷವಾಗಿ ನನಗೆ ಬೆನ್ನೆಲುಬಾಗಿ ನಿಂತ ಎಲ್ಲ ಶಿಕ್ಷಕ ಬಂಧುಗಳಿಗೂ ಅನಂತ ಧನ್ಯವಾದಗಳು

-ಮಹೇಶ.ನೀಲಕಂಠ.ಚನ್ನಂಗಿ. ನಿರ್ದೇಶಕರು,ಕ.ರಾ.ಸ.ನೌ.ಸಂಘಟನೆ ಚನ್ನಮ್ಮನ ಕಿತ್ತೂರು

LEAVE A REPLY

Please enter your comment!
Please enter your name here