
ಬೆಳಗಾವಿ, ಅಕ್ಟೋಬರ್ 27: ಜಿಲ್ಲಾಧಿಕಾರಿ ಕಛೇರಿಯ ನಗರಾಭಿವೃದ್ಧಿ ಕೋಶದ ಕಾರ್ಯನಿರ್ವಾಹಕ ಇಂಜಿನಿಯರ್ ಆಗಿರುವ ಪದ್ಮಕಾಂತ ಶೆಂಡೂರೆ ಇಂದು ಬೆಳಗಿನ ಜಾವ ತೀವ್ರ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ.
ಇದೇ ನವಂಬರ್ 2024 ರಲ್ಲಿ ಇವರು ಸೇವೆಯಿಂದ ನಿವೃತ್ತರಾಗುತ್ತಿದ್ದರು. ನಿಪ್ಪಾಣಿ ಮೂಲದ ಇವರು ಇಂದು ಬೆಳಗಿನ ಜಾವ ಬೆಳಗಾವಿಯ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.