Home ಕರ್ನಾಟಕ ”ಡಿ.10ಕ್ಕೆ 5ಸಾವಿರ ಟ್ರ್ಯಾಕ್ಟರ್ಸ್ ಜೊತೆಗೆ ವರ್ಣಸೌಧ ಮುತ್ತಿಗೆ’ 2ಎ ಮಿಸಲಾತಿ ಹುಸಿ ಭರವಸೆ; ಸರ್ಕಾರ ವಿರುದ್ಧ ಗುಡುಗಿದ ಮೃತ್ಯುಂಜಯ ಶ್ರೀ!

”ಡಿ.10ಕ್ಕೆ 5ಸಾವಿರ ಟ್ರ್ಯಾಕ್ಟರ್ಸ್ ಜೊತೆಗೆ ವರ್ಣಸೌಧ ಮುತ್ತಿಗೆ’ 2ಎ ಮಿಸಲಾತಿ ಹುಸಿ ಭರವಸೆ; ಸರ್ಕಾರ ವಿರುದ್ಧ ಗುಡುಗಿದ ಮೃತ್ಯುಂಜಯ ಶ್ರೀ!

0
”ಡಿ.10ಕ್ಕೆ 5ಸಾವಿರ ಟ್ರ್ಯಾಕ್ಟರ್ಸ್ ಜೊತೆಗೆ ವರ್ಣಸೌಧ ಮುತ್ತಿಗೆ’ 2ಎ ಮಿಸಲಾತಿ ಹುಸಿ ಭರವಸೆ; ಸರ್ಕಾರ ವಿರುದ್ಧ ಗುಡುಗಿದ ಮೃತ್ಯುಂಜಯ ಶ್ರೀ!

ಬೆಳಗಾವಿ, ನವೆಂಬರ್ 26: ಸೂರ್ಯ- ಚಂದ್ರರು ಇರುವುದು ಎಷ್ಟು ಸತ್ಯವೋ?. ಡಿ.10ರಂದು ಬೆಳಗಾವಿ ಸುವರ್ಣಸೌಧಕ್ಕೆ ಮುತ್ತಿಗೆ ಹಾಕಿ, ನಮ್ಮ ನೋವನ್ನು ವ್ಯಕ್ತಪಡಿಸಿ, ಮೀಸಲಾತಿ ಪಡೆಯೋದು ಕೂಡ ಅಷ್ಟೇ ಸತ್ಯ ಎಂದು ಲಿಂಗಾಯತ ಪಂಚಮಸಾಲಿ ಜಗದ್ಗುರು ಬಸವಜಯ ಮೃತ್ಯುಂಜಯ ಸ್ವಾಮೀಜಿ ಗುಡುಗಿದ್ದಾರೆ.

ಪಂಚಮಸಾಲಿ ಸಮಾಜ ಬಾಂಧವರು ಯಾವುದೇ ಊಹಾಪೋಹಗಳಿಗೆ ಕಿವಿಗೊಡದೇ ಹೋರಾಟದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗಿಯಾಗುವಂತೆ ಲಿಂಗಾಯತ ಪಂಚಮಸಾಲಿ ಜಗದ್ಗುರು ಬಸವಜಯ ಮೃತ್ಯುಂಜಯ ಸ್ವಾಮೀಜಿ ಕರೆ ನೀಡಿದರು.

ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಹಿಂದೆ ಜಗದೀಶ್​ ಶೆಟ್ಟರ್, ಯಡಿಯೂರಪ್ಪ, ಬೊಮ್ಮಾಯಿ ಅವರು ಮುಖ್ಯಮಂತ್ರಿ ಇದ್ದಾಗಲೂ ಸುವರ್ಣಸೌಧದ ಮುಂದೆ ಉಪವಾಸ ಸತ್ಯಾಗ್ರಹ, ಹೋರಾಟ ಮಾಡಿದ್ದೇವೆ. ಹಾಗಾಗಿ, ಡಿ.10ರಂದು ವಕೀಲರ ಪರಿಷತ್ ಮುಂದಾಳತ್ವದಲ್ಲಿ ಸುಮಾರು 5 ಸಾವಿರ ಟ್ರ್ಯಾಕ್ಟರ್​ಗಳೊಂದಿಗೆ ಲಕ್ಷಾಂತರ ಪಂಚಮಸಾಲಿಗರು ಸುವರ್ಣಸೌಧಕ್ಕೆ ಮುತ್ತಿಗೆ ಹಾಕುತ್ತೇವೆ ಎಂದು ತಿಳಿಸಿದರು.

LEAVE A REPLY

Please enter your comment!
Please enter your name here