
ಬೆಳಗಾವಿ, ಅಕ್ಟೋಬರ್ 25: ನಗರದಲ್ಲಿ ಸ್ವಚ್ಛ ಪರಿಸರ ಮತ್ತು ಹಸಿರು ಪ್ರಕೃತಿ ಸ್ನೇಹಿ ವಾತಾವರಣ ನಿರ್ಮಾಣಕ್ಕಾಗಿ ಸ್ಮಾರ್ಟ್ ಸಿಟಿ ನಾಳೆ(ಅ. 26) ಸೈಕ್ಲೊಥಾನ್ ಜಾಗೃತಿ ಕಾರ್ಯಕ್ರಮ ಹಮ್ಮಿಕೊಂಡಿದೆ.
ಬೆಳಗ್ಗೆ 7ಗಂಟೆಯಿಂದ 9ಗಂಟೆಯವರೆಗೆ ಜರುಗುವ ಈ ಜಾಗೃತಿ ಮೆರವಣಿಗೆಯಲ್ಲಿ ಜಿಲ್ಲೆಯ ಅಧಿಕಾರಿಗಳು, ಮುಖಂಡರು, ನಾಗರಿಕರು, ಸೈಕಲ್ ಸವಾರರಾಗಿ ಭಾಗವಹಿಸಲಿದ್ದಾರೆ.
ರಾಣಿ ಚೆನ್ನಮ್ಮ ವೃತ್ತದಿಂದ ಆರಂಭಗೊಳ್ಳುವ ಸೈಕ್ಲೊಥಾನ್ ಹನುಮಾನ ನಗರದ ಮೂಲಕ ಮಹಾತ್ಮಾ ಗಾಂಧಿ ಪ್ರತಿಮೆ ಬಳಿ ಮುಕ್ತಾಯಗೊಳ್ಳಲಿದೆ.
ನಗರದ ಎಲ್ಲ ನಾಗರಿಕರು ಅರ್ಥಪೂರ್ಣ ಜಾಗೃತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕೆಂದು ಸಬೆಳಗಾವಿ ಸ್ಮಾರ್ಟ್ ಸಿಟಿ ಪ್ರಕಟಣೆಯಲ್ಲಿ ತಿಳಿಸಿದೆ.