ಬೆಳಗಾವಿ: ೧೩ ನವಂಬರ್: ಬೆಳಗಾವಿ ಗ್ರಾಮೀಣ ಕ್ಷೇತ್ರದ ಕರಡಿಗುದ್ದಿ ಗ್ರಾಮದ ಶ್ರೀ ಯಲ್ಲಪ್ಪ ದ್ಯಾ ಬೋರಣ್ಣವರ ಎಂಬ ವ್ಯಕ್ತಿ ಕಳೆದ ತಿಂಗಳು ತನ್ನ ಹೆಂಡತಿಯ ಮನೆಗೆ ತೆರಳುವ ಸಮಯದಲ್ಲಿ ನೇಸರಗಿಯ, ಕೊಳದೂರು ಗ್ರಾಮದ ಬಳಿ ಹಳ್ಳದ ನೀರಿನಲ್ಲಿ ಕೊಚ್ಚಿಕೊಂಡು ಹೋಗಿ ಮೃತಪಟ್ಟ ಹಿನ್ನೆಲೆಯಲ್ಲಿ ಇಂದು ಮೃತರ ಮನೆಗೆ ತೆರಳಿ, ಕುಟುಂಬಸ್ಥರಿಗೆ ಸಾಂತ್ವನ ವ್ಯಕ್ತಪಡಿಸಿದ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಮೃತರ ಕುಟುಂಬಕ್ಕೆ 5 ಲಕ್ಷ ರೂ,ಗಳ ಪರಿಹಾರದ ಚೆಕ್ ನ್ನು ಮೃತನ ಹೆಂಡತಿ ಶ್ರೀಮತಿ ಭಾರತಿ ಯಲ್ಲಪ್ಪ ಬೋರಣ್ಣವರ ಅವರಿಗೆ ವಿತರಿಸಿದರು.
ಈ ವೇಳೆ ವಿಧಾನ ಪರಿಷತ್ ಸದಸ್ಯರಾದ ಚನ್ನರಾಜ ಹಟ್ಟಿಹೊಳಿ, ಮಾಜಿ ತಾಲೂಕಾ ಪಂಚಾಯತ್ ಅಧ್ಯಕ್ಷರಾದ ಶಂಕರಗೌಡ ಪಾಟೀಲ, ಬೈಲಹೊಂಗಲ ತಹಶಿಲ್ದಾರ ಶಿರಹಟ್ಟಿ, ಕಂದಾಯ ನಿರೀಕ್ಷಕ ಶಶಿಧರ್ ಗುರವ ಇತರರು ಉಪಸ್ಥಿತರಿದ್ದರು.
