
ಚನ್ನಮ್ಮನ ಕಿತ್ತೂರು, ನವೆಂಬರ್ 10: ಕೃಷಿ ಪ್ರಧಾನ ಭಾರತ ದೇಶದಲ್ಲಿ ರೈತನನ್ನು ಈ ದೇಶದ ಬೆನ್ನೆಲುಬು ಎಂದು ಗೌರವಿಸಲಾಗುತ್ತದೆ. ಅಧ್ಯಾತ್ಮ ಕೃಷಿಯೊಂದಿಗೆ ಅನ್ನ ನೀಡುವ ಭೂತಾಯಿ ಸೇವೆಯಲ್ಲೂ ತಮ್ಮನ್ನು ತಾವು ತೊಡಗಿಸಿಕೊಂಡು ಶ್ರೀಮಠದ ಭೂಮಿಯಲ್ಲಿ ಬೆಳೆದ ಭತ್ತದ ಕಟಾವಿನಲ್ಲಿ ಸಂತಸದಿಂದಲೇ ಭಾಗಿಯಾದ ನಿಜಗುಣಾನಂದ ಶ್ರೀಗಳು ಕೃಷಿಯಲ್ಲೂ ಸೈ ಪ್ರವಚನಕ್ಕೂ ಸೈ ಎನಿಸಿಕೊಂಡಿದ್ದಾರೆ.
ಇನ್ನು ನಿಜಗುಣಾನಂದ ಶ್ರೀ ಭತ್ತದ ಕಟಾವು ಮಾಡುವ ಕಾರ್ಯವನ್ನು ಅವರ ಭಕ್ತರು ವಿಡಿಯೋ ಮಾಡಿ ಶ್ರೀಗಳ ಫೇಸ್ಬುಕ್ ಖಾತೆಯಿಂದ ಹಂಚಿಕೊಂಡಿದ್ದಾರೆ.