
ರಾಯಚೂರು, ಜನವರಿ 08: ರಾಜ್ಯದ ವಿವಿಧೆಡೆ ಲೋಕಾಯುಕ್ತ ಅಧಿಕಾರಿಗಳು ಬುಧವಾರ(ಜ8) ದಾಳಿ ಮಾಡಿದ್ದು, ತಾಲೂಕಿನ ಗಿಲ್ಲೆಸುಗೂರು ಜೆಸ್ಕಾಂ ಉಪ ವಿಭಾಗದ ಜೆ.ಇ ಹುಲಿರಾಜ್ ನಿವಾಸದ ಮೇಲೆ ಕೂಡ ದಾಳಿ ನಡೆಸಲಾಗಿದೆ.
ಐಡಿಎಸ್ ಎಂಟಿ ಲೆಔಟ್ ನಲ್ಲಿರುವ ಅಮೃತವರ್ಷಿಣಿ ಮನೆ ಹಾಗೂ ಮಡ್ಡಿಪೇಟೆಯಲ್ಲಿರುವ ಮನೆಗಳಲ್ಲಿ ಲೋಕಾಯುಕ್ತ ಪೊಲೀಸರು ತಪಾಸಣೆ ಕೈಗೊಂಡಿದ್ದಾರೆ. ದಾಖಲೆಗಳನ್ನು ಪರಿಶೀಲನೆ ನಡೆಸುತ್ತಿದ್ದಾರೆ. ದಾಖಲೆಗಳ ಶೋಧ ಕಾರ್ಯ ಮುಂದುವರಿದಿದೆ.