
ಹುಬ್ಬಳ್ಳಿ, ಅಕ್ಟೋಬರ್ 09: ದಸರಾ ಉತ್ಸವ ಕಮಿಟಿ, ಕಮರಿಪೇಟ, ಹುಬ್ಬಳ್ಳಿ ಇವರ ವತಿಯಿಂದ ದಸರಾ ಉತ್ಸವದ ನಿಮಿತ್ತ ದಾಂಡಿಯಾ ಕಾರ್ಯಕ್ರಮ ವನ್ನು ಹುಬ್ಬಳ್ಳಿ ಮೂರುಸಾವಿರ ಮಠದ ಆವರಣದಲ್ಲಿ ದಾಂಡಿಯಾ ಕಾರ್ಯಕ್ರಮ ನಡೆಸಲಾಯಿತು.
ಮಾಜಿ ಮುಖ್ಯಮಂತ್ರಿಗಳು ಹಾಗೂ ಬೆಳಗಾವಿ ಲೋಕಸಭಾ ಕ್ಷೇತ್ರದ ಸಂಸದರಾದ ಶ್ರೀ ಜಗದೀಶ ಶೆಟ್ಟರ್ ದಾಂಡಿಯಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಅಧ್ಯಕ್ಷತೆಯನ್ನು ಶಶಿಕುಮಾರ ಮೆಹರವಾಡೆ ರಾಜ್ಯಾಧ್ಯಕ್ಷರು, ಎಸ್.ಎಸ್.ಕೆ. ಸಮಾಜ ಕರ್ನಾಟಕ ಇವರು ಅಧ್ಯಕ್ಷತೆ ವಹಿಸಿದ್ದರು.
ಕಾರ್ಯಕ್ರಮದ ವೇದಿಕೆಯ ಮೇಲೆ ವಿಠ್ಠಲಸಾ ಲದವಾ ಅಧ್ಯಕ್ಷರು, ದಸರಾ ಉತ್ಸವ ಕಮೀಟಿ ಹಾಗೂ ಚೆರಮನ್ನರು ದಿ ಎಸ್.ಎಸ್.ಕೆ. ಕೋ-ಆಫ್ ಬ್ಯಾಂಕ್ ಲಿ.ಮಾನ್ಯ ನಾಗೇಶ ಕಲಬುರ್ಗಿ ಮಾಜಿ ಅಧ್ಯಕ್ಷರು, ಹುಬ್ಬಳ್ಳಿ ಧಾರವಾಡ ನಗರಾಭಿವೃದ್ಧಿ ಪ್ರಾಧಿಕಾರ. ಮೋತಿಲಾಲಸಾ ಕಬಾಡೆ ಅಧ್ಯಕ್ಷರು, ಎಸ್.ಎಸ್.ಕೆ. ಕಮರಿಪೇಟ ಪಂಚ ಕಮಿಟಿ.ಮಾನ್ಯ ಅಶೋಕ ಕಾಟವೆ ಮಾಜಿ ಶಾಸಕರು. ಪರಶುರಾಮ ದಿವಾನದ ಯೋಧರು, ಸುಭಾಸ ಭಾಂಡಗೆ, ವೀರು ಕಠಾರೆ ವಿಜಯ ಕಲಬುರ್ಗಿ, ಸತೀಶ ಹಬೀಬ, ಪ್ರಕಾಶ ಬುರಬುರೆ, ಶ್ರೀ ವಿನಾಯಕ ಲದವಾ, ಶಂಕರ ಮೆಹರವಾಡೆ, ಶಂಕರ ಹಬೀಬ, ಮಂಜು ಪವಾರ, ಮಂಜು ದಲಬಂಜನ್, ಸದು ಕಬಾಡೆ, ವಿಜಯ ಮಿಸ್ಕಿನ್, ವಿಜಯ ಪವಾರ, ಗಣೇಶ್ ಲದವಾ ಮುಂತಾದವರು ಉಪಸ್ಥಿತರಿದ್ದರು.