Home ಕರ್ನಾಟಕ ರಾಜ್ಯದ 11 ಕಡೆ ‘ಲೋಕಾ’ ದಾಳಿ! ಅಧಿಕಾರಿಗಳಿಗೆ ನಸುಕಿನಲ್ಲೇ ಶಾಕ್! ಏನೆಲ್ಲಾ ಸಿಕ್ತು?

ರಾಜ್ಯದ 11 ಕಡೆ ‘ಲೋಕಾ’ ದಾಳಿ! ಅಧಿಕಾರಿಗಳಿಗೆ ನಸುಕಿನಲ್ಲೇ ಶಾಕ್! ಏನೆಲ್ಲಾ ಸಿಕ್ತು?

0
ರಾಜ್ಯದ 11 ಕಡೆ ‘ಲೋಕಾ’ ದಾಳಿ! ಅಧಿಕಾರಿಗಳಿಗೆ ನಸುಕಿನಲ್ಲೇ ಶಾಕ್! ಏನೆಲ್ಲಾ ಸಿಕ್ತು?

ಬೆಂಗಳೂರು, ನವೆಂಬರ್ 12: ಭ್ರಷ್ಟ ಅಧಿಕಾರಿಗಳಿಗೆ ಲೋಕಾಯುಕ್ತ ಪೊಲೀಸರು ಇಂದು ಬೆಳ್ಳಂಬೆಳಿಗ್ಗೆ ಶಾಕ್ ನೀಡಿದ್ದು ರಾಜ್ಯದ 11 ಕಡೆಗಳಲ್ಲಿ ಏಕಕಾಲಕ್ಕೆ ಅಧಿಕಾರಿಗಳ ಮನೆ ಹಾಗೂ ಕಚೇರಿ ದಾಳಿ ಮಾಡಿ ಅಪಾರ ಪ್ರಮಾಣದ ಆಸ್ತಿಪಾಸ್ತಿಗಳನ್ನು ಪತ್ತೆ ಹಚ್ಚಿದ್ದಾರೆ.

ಬೀದರ್ ಜಿಲ್ಲಾ ತರಬೇತಿ ಕೇಂದ್ರದ ಅಧಿಕಾರಿ ರವೀಂದ್ರ ರೊಟ್ಟೆ, ದಾವಣಗೆರೆ ಜಿಲ್ಲಾ ಕೈಗಾರಿಕಾ ಮತ್ತು ವಾಣಿಜ್ಯ ಇಲಾಖೆ ಸಹಾಯಕ ನಿರ್ದೇಶಕ ಕಮಲ್ ರಾಜ್, ಹಾವೇರಿಯಲ್ಲಿ ಗ್ರಾಮೀಣ ಕುಡಿಯುವ ನೀರು ಸರಬರಾಜು ಇಲಾಖೆ ಉವಿಲ್ ಭಾಗದ ಎಇಇ ಕಾಶೀನಾಥ್ ಭಜಂತ್ರಿ ಮನೆ ಮತ್ತು ಕಚೇರಿಗಳ ಮೇಲೆ ದಾಳಿ ನಡೆಸಿದ್ದಾರೆ.

ಕಾಶೀನಾಥ್ ಭಜಂತ್ರಿ ಮನೆಯಲ್ಲಿ 14 ಲಕ್ಷ ರೂಪಾಯಿ ನಗದ ಹಣ ವಶಪಡಿಸಿಕೊಂಡಿದ್ದಾರೆ. ಕಮಲ್ ರಾಜ್ ಮನೆಯಲ್ಲಿ 1 ಲಕ್ಷ ನಗದು, ಇನ್ನೋವಾ ಕಾರು ಹಾಗೂ ಆಸ್ತಿಯ ದಾಖಲೆ ಪತ್ತೆಯಾಗಿದ್ದು ಇನ್ನುಳಿದಂತೆ ಅಧಿಕಾರಿಗಳು ನಿರಂತರವಾಗಿ ಪರಿಶೀಲನೆ ನಡೆಸಿದ್ದಾರೆ

LEAVE A REPLY

Please enter your comment!
Please enter your name here