
ಬೆಂಗಳೂರು, ಅಕ್ಟೋಬರ್ 08: ವಿಚಾರಣೆ ಹಂತದಲ್ಲಿ ಇರುವ ನನ್ನ ವಿರುದ್ಧ ಪ್ರಕರಣದ ಸಾಕ್ಷಿಗಳ ಮೇಲೆ ಪ್ರಭಾವ ಬೀರುವ ದುರುದ್ದೇಶದಿಂದ ನನ್ನ ವಿರುದ್ಧ ಲೈಂಗಿಕ ಕಿರುಕುಳ ಆರೋಪ ಎಸಗಿದ್ದಾರೆ ಎಂದು ಶಾಸಕ ವಿನಯ್ ಕುಲಕರ್ಣಿ ಪ್ರತಿಕ್ರಿಯಿಸಿದ್ದಾರೆ.
ಕಾವೇರಿ ನಿವಾಸದಲ್ಲಿಂದು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಶಾಸಕ ಕುಲಕರ್ಣಿ ಫೋನ್ ನಲ್ಲಿ ಯಾವುದೋ ಕೆಲಸದ ವಿಚಾರವಾಗಿ ನಡೆದ ಸಂಭಾಷಣೆ ಆಧಾರದಲ್ಲಿ ಲೈಂಗಿಕ ಕಿರುಕುಳ ಆರೋಪ ಸತ್ಯಕ್ಕೆ ದೂರವಾಗಿದೆ ಎಂದಿದ್ದಾರೆ.
ರೈತ ಸಂಘಟನೆ ಮುಖಂಡೆ ಹೀಗೆ ಆರೋಪಿಸಿದ್ದಾರೆ. ಸಮಸ್ಯೆ ಹೇಳಿಕೊಳ್ಳಲು ಫೋನ್ ಮಾಡುತ್ತಿದ್ದರಿಂದ ನಾನು ರೈತರಿಗೆ ಸಹಾಯವನ್ನೂ ಮಾಡಿದ್ದೇನೆ. ಕೆಲಸದ ವಿಚಾರದಲ್ಲಿಯ ಸಂಪರ್ಕವನ್ನು ದುರುದ್ದೇಶಪೂರಿತವಾಗಿ ಲೈಂಗಿಕ ಕಿರುಕುಳ ಎಂದು ಆರೋಪಿಸುತ್ತಿರುವುದು ರಾಜಕೀಯ ಷಡ್ಯಂತ್ರ ಎಂದಿದ್ದಾರೆ. ಇದೇ ದೂರಿಗೆ ನಾನೂ ಪ್ರತಿದೂರು ಕೊಟ್ಟಿದ್ದೇನೆ. ತನಿಖೆಯಿಂದ ಎಲ್ಲವೂ ಗೊತ್ತಾಗಲಿದೆ ಎಂದಿದ್ದಾರೆ ಶಾಸಕ ವಿನಯ್ ಕುಲಕರ್ಣಿ.