Home ಕರ್ನಾಟಕ ಶಿವಪೇಠ ಶಾಲೆಯಲ್ಲಿ 21 ನೇ ಗೋಡೆ ಬರಹ ಸೇವಾ ಕಾರ್ಯ! ವಿಶ್ವಬಂಧು ಸೇವಾ ಗುರು ಬಳಗದ ಸೇವೆಗೆ ಮೆಚ್ಚುಗೆ!

ಶಿವಪೇಠ ಶಾಲೆಯಲ್ಲಿ 21 ನೇ ಗೋಡೆ ಬರಹ ಸೇವಾ ಕಾರ್ಯ! ವಿಶ್ವಬಂಧು ಸೇವಾ ಗುರು ಬಳಗದ ಸೇವೆಗೆ ಮೆಚ್ಚುಗೆ!

0
ಶಿವಪೇಠ ಶಾಲೆಯಲ್ಲಿ  21 ನೇ ಗೋಡೆ ಬರಹ ಸೇವಾ ಕಾರ್ಯ! ವಿಶ್ವಬಂಧು ಸೇವಾ ಗುರು ಬಳಗದ ಸೇವೆಗೆ ಮೆಚ್ಚುಗೆ!

ಕೊಪ್ಪಳ, ನವೆಂಬರ್ 26: ಜಿಲ್ಲೆಯ ಯಲಬುರ್ಗಾ-ಕುಕನೂರು ತಾಲ್ಲೂಕಿನ ವಿಶ್ವಬಂಧು ಸೇವಾ ಗುರುಬಳಗದಿಂದ ರಾಮದುರ್ಗ ತಾಲ್ಲೂಕಿನ ಶಿವಪೇಠ ಶಾಲೆಯಲ್ಲಿ ರವಿವಾರ 21 ನೇ ಗೋಡೆ ಬರಹ ಸೇವಾ ಕಾರ್ಯ ಜರುಗಿತು.

ಬೆಳಿಗ್ಗೆ 10.30 ರಿಂದ ಸಂಜೆ 6. 30 ರವರಿಗೆ ಸೇವೆ ಸಲ್ಲಿಸಿ ಗುಣಾತ್ಮಕ ಶಿಕ್ಷಣಕ್ಕೆ ಪೂರಕವಾದ ಕಲಿಕಾಂಶಗಳು, ಚಿತ್ರಗಳು, ಪ್ರೇರಣಾತ್ಮಕ ನುಡಿಗಳಿಂದ ಶಾಲೆಯ ಕೊಠಡಿ ಹಾಗೂ ಕಾಂಪೌಂಡ್ ಅತ್ಯಂತ ಆಕರ್ಷಣೀಯವಾಗಿಸಿ ಗುಣಾತ್ಮಕ ಶಿಕ್ಷಣಕ್ಕೆ ಪೂರಕವಾಗಿದೆ ಇವರ ಸೇವೆ ಶ್ಲಾಘನೀಯ ಎಂದು ಮುಖ್ಯ ಶಿಕ್ಷಕರಾದ ಆತ್ಮಾನಂದ ಪಲ್ಲೇದ, SDMC ಅಧ್ಯಕ್ಷರಾದ ಬಸಪ್ಪ ಬೇವಿನಮರದ, ಪತ್ರಕರ್ತರು, ಶಿಕ್ಷಣ ಪ್ರೇಮಿಗಳಾದ S R ಗುರುಬಸಣ್ಣವರ ರವರು ಅಭಿಪ್ರಾಯ ವ್ಯಕ್ತಪಡಿಸಿದರು.

ವಿಶ್ವಬಂಧು ಸೇವಾ ಗುರುಬಳಗದ ಮುಖ್ಯಸ್ಥರಾದ ಸಿದ್ದಲಿಂಗಪ್ಪ ಶ್ಯಾಗೋಟಿ ರವರು ಮಾತನಾಡಿ ಶಾಲೆಯ ಶಿಕ್ಷಕರಾದ ಸಂತೋಷ ಕೋರಿ ರವರು ಯಲಬುರ್ಗಾ ತಾಲ್ಲೂಕಿನಲ್ಲಿ ಹಾಗೂ ಬಳಗದಲ್ಲಿ ನಿಸ್ವಾರ್ಥ ಮತ್ತು ಸಮರ್ಪಣಾ ಮನೋಭಾವದಿಂದ ಸೇವೆ ಸಲ್ಲಿಸಿದ್ದಾರೆ ಅವರ ಕೋರಿಕೆಯಂತೆ ಗೋಡೆ ಬರಹ ಸೇವಾ ಕಾರ್ಯ ಹಮ್ಮಿಕೊಳ್ಳಲಾಗಿದೆ ತಂಡದ ಸದಸ್ಯರಿಗೆ ಮತ್ತು ಸಹಕಾರ ನೀಡಿದ ಶಾಲೆಯ ಶಿಕ್ಷಕರಿಗೆ ಹಾಗೂ ಗ್ರಾಮಸ್ಥರಿಗೆ ಧನ್ಯವಾದಗಳನ್ನು ಸಲ್ಲಿಸಿದರು.

ಹಾವೇರಿಯಿಂದ ಆಗಮಿಸಿದ್ದ ವಿನಯಕುಮಾರ ಪಾಟೀಲ್, ಯಲಬುರ್ಗಾ ಕುಕನೂರು ತಾಲ್ಲೂಕಿನಿಂದ ಆಗಮಿಸಿದ್ದ ಖಾಜಾಸಾಬ ಹೊಸಳ್ಳಿ, ಕಾಶಿನಾಥ ಮಿಸ್ಕಿನ್, ಕೊಟ್ರೇಶ ಪಟ್ಟಣ, ಪ್ರಭು ಶಿವನಗೌಡ್ರ, ಮಹಾವೀರ ಕಲ್ಭಾವಿ, ಶಿವಕುಮಾರ ಮುತ್ತಾಳ, ಮಂಜುನಾಥ ಮನ್ನಾಪುರ, ಪರಮೇಶ ಚಿಂತಾಮಣಿ, ಬಸವರಾಜ ಮುಳುಗುಂದ, ಮೆಹಬೂಬ ಬಾದಶಹ, ಕಳಕನಗೌಡ ಪಾಟೀಲ್ ರವರು ಶಾಲೆಯ ಶಿಕ್ಷಕರಾದ Skirt ಕೋರಿ, ಸ್ಥಳೀಯ ಶಿಕ್ಷಕರಾದ ಮಲ್ಲಿಕಾರ್ಜುನ ಬಾವಿಕಟ್ಟಿ, ಶಿವಾನಂದ ಮೋಟೆ, ಪದವಿ ವಿದ್ಯಾರ್ಥಿಗಳು ಸೇವಾ ಕಾರ್ಯದಲ್ಲಿ ಭಾಗವಹಿಸಿದ್ದರು.

ಗ್ರಾಮದ ಹಿರಿಯರಾದ ನಾಗಪ್ಪ ದೇವನಾಳ, ಸುರೇಶ ಗುಣಮುಖಿ, ಶಂಕರ ಚನ್ನಪ್ಪನವರ, ಶಿವಾನಂದ ಆಲೂರ, ಶಂಕ್ರಪ್ಪ ಕೊಣ್ಣೂರ ರವರು ಗ್ರಾಮ ಮತ್ತು ಶಾಲೆಯ ಪರವಾಗಿ ಸೇವೆ ಸಲ್ಲಿಸಿದ ಸರ್ವರಿಗೂ ಸನ್ಮಾನಿಸಿ ಸೇವಾ ಕಾರ್ಯವನ್ನು ಶ್ಲಾಘಿಸಿದರು.

LEAVE A REPLY

Please enter your comment!
Please enter your name here