
ಹುಬ್ಬಳ್ಳಿ: ಟೀಮ್ ಗ್ಯಾಲೋಪ್ ಮತ್ತು ಎಸ್ಎಚ್ಕೆ ಫೌಂಡೇಶನ್ ವತಿಯಿಂದ ಗುರುವಾರ ಹುಬ್ಬಳ್ಳಿಯ ಭಾಸ್ಕರ ಭವನದಲ್ಲಿ ಲೀಡರ್ಶಿಪ್ ತರಬೇತಿ ಕಾರ್ಯಕ್ರಮ ಅದ್ದೂರಿಯಾಗಿ ಜರುಗಿತು. ಈ ಕಾರ್ಯಕ್ರಮವು ಯಶಸ್ಸಿನ ಮಾರ್ಗವನ್ನು ಕಂಡುಕೊಳ್ಳಲು ಮತ್ತು ಜೀವನದಲ್ಲಿ ಗುರಿಗಳನ್ನು ಸಾಧಿಸಲು ಅಗತ್ಯವಾದ ತ್ಯಾಗ, ನಿಷ್ಠೆ, ಮತ್ತು ಕೌಶಲ್ಯಗಳ ಬಗ್ಗೆ ಒಳನೋಟಗಳನ್ನು ನೀಡಿತು.ಎಸ್ಎಚ್ಕೆ ಫೌಂಡೇಶನ್ನ ಸಂಸ್ಥಾಪಕರಾದ ಸರ್ ಎಸ್. ಎಚ್. ಕುಲಕರ್ಣಿಯವರು ಮಾತನಾಡುತ್ತಾ, “ಮಾತು ಮತ್ತು ಕೃತಿಗಳು ದೊಡ್ಡದಾದಾಗ ಮನಸ್ಸು ಮತ್ತು ದೃಷ್ಟಿಕೋನ ಬದಲಾಗುತ್ತದೆ, ಇದರಿಂದ ಜೀವನವೇ ರೂಪಾಂತರಗೊಳ್ಳುತ್ತದೆ,” ಎಂದು ಹೇಳಿದರು. ಯಶಸ್ಸಿಗೆ ಅಗತ್ಯವಾದ ಐದು ನಿಷ್ಠೆಗಳನ್ನು ಅವರು ಒತ್ತಿ ಹೇಳಿದರು: ಕಲಿಕೆಯ ನಿಷ್ಠೆ, ಅಭ್ಯಾಸದ ನಿಷ್ಠೆ, ದುಡಿಮೆಯ ನಿಷ್ಠೆ, ಸಮಯ ಮತ್ತು ಹಣವನ್ನು ಜವಾಬ್ದಾರಿಯಿಂದ ಬಳಸುವುದು, ಮತ್ತು ಸೇವೆಯ ಮನೋಭಾವ. “ಎರಡು ವರ್ಷಗಳನ್ನು ಸಂಪೂರ್ಣವಾಗಿ ಜೀವನ ರೂಪಿಸಲು ಮೀಸಲಿಡಿ, ಏಕೆಂದರೆ ಜ್ಞಾನದ ಜೊತೆಗೆ ನಿಷ್ಠೆ ಮತ್ತು ಕ್ರಿಯೆ ಇದ್ದಾಗ ಮಾತ್ರ ಹಣದ ಹೋರಾಟದಿಂದ ಮುಕ್ತವಾದ ಸ್ವಾತಂತ್ರ್ಯದ ಜೀವನ ಸಾಧ್ಯ,” ಎಂದು ಅವರು ತಿಳಿಸಿದರು.
ಸರ್ ಎಸ್. ಎಚ್. ಕುಲಕರ್ಣಿಯವರು ‘ಡಿಸೈನ್ಡ್ ಲೈಫ್’ ಮತ್ತು ‘ಡೀಫಾಲ್ಟ್ ಲೈಫ್’ ನಡುವಿನ ವ್ಯತ್ಯಾಸವನ್ನು ಮನ ಮುಟ್ಟುವಂತೆ ವಿವರಿಸಿದರು. “ನಿಮಗೆ ಏನು ಬೇಕು ಎಂದು ನಿಖರವಾಗಿ ನಿರ್ಧರಿಸಿದರೆ, ಪ್ರಕೃತಿಯೂ ಸಹ ಸಹಾಯ ಮಾಡುತ್ತದೆ. ನಿಮ್ಮ ಭವಿಷ್ಯ ಇಂದಿನ ಕ್ರಮಗಳ ಮೇಲೆ ನಿಂತಿದೆ,” ಎಂದು ಯುವಕರಿಗೆ ಕರೆ ನೀಡಿದರು. “ನೀವು ಏನು ಬೇಕೆಂದು ತಿಳಿದರೆ, ಅದು ನಿಮಗೆ ಖಂಡಿತ ಸಿಗುತ್ತದೆ,” ಎಂದು ಅವರು ಒತ್ತಿ ಹೇಳಿದರು.
ನೆಟ್ವರ್ಕ್ ಮಾರ್ಕೆಟಿಂಗ್ನಲ್ಲಿ ವಿಫಲತೆಗೆ ಕಾರಣಗಳನ್ನು ವಿಶ್ಲೇಷಿಸುತ್ತಾ, ತಪ್ಪು ಕಂಪನಿ ಆಯ್ಕೆ, ವ್ಯವಹಾರದ ಮಾದರಿಯಲ್ಲಿ ನಂಬಿಕೆಯ ಕೊರತೆ, ತಕ್ಷಣದ ಯಶಸ್ಸಿನ ನಿರೀಕ್ಷೆ, ನಿರಾಕರಣೆಯ ಭಯ, ಸ್ವಯಂ ಪ್ರೇರಣೆಯ ಕೊರತೆ, ಮತ್ತು ಕೌಶಲ್ಯದ ಕೊರತೆಯಂತಹ ಅಂಶಗಳನ್ನು ಗುರುತಿಸಿದರು. ಯಶಸ್ಸಿಗೆ ಅಗತ್ಯವಾದ ಸಿದ್ಧತೆಗಳಾದ ಮಾನಸಿಕ, ಆರ್ಥಿಕ, ದೈಹಿಕ, ಭಾವನಾತ್ಮಕ, ಬೌದ್ಧಿಕ, ಮತ್ತು ಸಾಮಾಜಿಕ ಸಿದ್ಧತೆಗಳನ್ನು ಒತ್ತಿ ಹೇಳಿದರು.

ಕಾರ್ಯಕ್ರಮದಲ್ಲಿ ‘RUN’ ಎಂಬ ಸರಳ ಶಕ್ತಿಶಾಲಿ ತಂತ್ರವನ್ನು ಪರಿಚಯಿಸಲಾಯಿತು: Retail (ಪ್ರತಿ ತಿಂಗಳು ₹3000 ಮೌಲ್ಯದ ಉತ್ಪನ್ನ ಮಾರಾಟ), Use (ಪ್ರತಿ ತಿಂಗಳು ₹2000 ಮೌಲ್ಯದ ಉತ್ಪನ್ನ ಬಳಕೆ), ಮತ್ತು Network (ವಾರಕ್ಕೊಂದು ತಂಡಕ್ಕೆ ಹೊಸ ಸದಸ್ಯರನ್ನ ಸೇರಿಸುವುದು). ನೆಟ್ವರ್ಕ್ ಮಾರ್ಕೆಟಿಂಗ್ ಒಂದು ಮುಕ್ತಾಯವಲ್ಲ, ಬದಲಿಗೆ ಜೀವನದ ಹೊಸ ಆರಂಭ ಎಂಬ ಸಂದೇಶವನ್ನು ಯುವ ಮನಸ್ಸುಗಳಿಗೆ ತಿಳಿಸಿದರು ಈ ಕಾರ್ಯಕ್ರಮವು ಎಲ್ಲರಿಗೂ ಸ್ಫೂರ್ತಿಯಾಯಿತು.
ಗ್ಯಾಲೋಪ್ ಟೀಮಿನ ಸಂಸ್ಥಾಪಕರಾದ ಶಿವಂಶಂಕ ಭಿಕ್ಷಾವತಿಮಠ ಅವರು ಮಾತನಾಡಿ “ನಾವು ಹೆಚ್ಚಿನದನ್ನು ಮಾಡುವ ಅಗತ್ಯವಿಲ್ಲ. ವೇಸ್ಟಿಜ್ ಸಿಸ್ಟಮ್ನ ಚೌಕಟ್ಟಿನಲ್ಲಿ ಮತ್ತು ಸರ್ ಎಸ್. ಎಚ್. ಕುಲಕರ್ಣಿಯವರು ತೋರಿಸಿದ ಮಾರ್ಗದರ್ಶನದಲ್ಲಿ ಸ್ಥಿರವಾಗಿ ನಡೆದರೆ, ನಾವು ಬಯಸಿದ ಜೀವನವನ್ನು ಜೀವಿಸಲು ಸಾಧ್ಯವಿದೆ,” ಎಂದು ಒತ್ತಿ ಹೇಳಿದರು.
ಯಶಸ್ಸು ಸಾಧಿಸಿದ ನೂರಾರು ಸಾಧಕರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಿ ಗೌರವಿಸಲಾಯಿತು, ಇದು ಎಲ್ಲರಿಗೂ ಪ್ರೇರಣೆಯಾಯಿತು.ಈ ಸನ್ಮಾನ ಸಮಾರಂಭವು ತಂಡದ ಸದಸ್ಯರಲ್ಲಿ ಉತ್ಸಾಹವನ್ನು ಮೂಡಿಸಿತು ಮತ್ತು ವೇಸ್ಟಿಜ್ನ ಮೂಲಕ ಯಶಸ್ಸಿನ ಗುರಿಯನ್ನು ಸಾಧಿಸುವ ವಿಶ್ವಾಸವನ್ನು ಬಲಪಡಿಸಿತು. “ನಿಷ್ಠೆಯಿಂದ ಕೆಲಸ ಮಾಡಿ, ಸರಿಯಾದ ಮಾರ್ಗದರ್ಶನವನ್ನು ಅನುಸರಿಸಿದರೆ ಯಶಸ್ಸು ಯಶಸ್ಸಿನ ಮಾರ್ಗದಲ್ಲಿ ಸಾಗಲು ಸ್ಫೂರ್ತಿದಾಯಕ ವಾಗುತ್ತದೆ ಎಂದು ಹೇಳಿದ ಮಾತು ಕಾರ್ಯಕ್ರಮದ ಯಶಸ್ಸನ್ನು ಮತ್ತಷ್ಟು ಹೆಚ್ಚಿಸಿತು.
ಈ ವೇಳೆ ರಾಜ್ಯದ ಮೂಲೆಮೂಲೆಯಿಂದ ನೂರಾರು ವೇಸ್ಟಿಜ್ ಡಿಸ್ಟರಬ್ಯೂಟರಗಳು ಆಕಾಂಕ್ಷಿ ಡಿಸ್ಟರಬ್ಯೂಟರಗಳು ಹಾಗೂ ಅವರ ಪಾಲಕರು ಆಗಮಿಸಿದ್ದರು.

ಬಸವರಾಜ ಚಿನಗುಡಿ ವರದಿಗಾರರು ಚನ್ನಮ್ಮನ ಕಿತ್ತೂರು. |