
ಪ್ರಾಯಾಗರಾಜ್, ಜನವರಿ 20 ಪ್ರಸ್ತುತ ಕುಂಭಮೇಳ ದೇಶದಾದ್ಯಂತ ಸುದ್ದಿಯಲ್ಲಿರುವ ವಿಷಯ. ಈಗಾಗಲೇ ಐಐಟಿ ಬಾಬಾ, ಗ್ಲಾಮರಸ್ ಸಾಧ್ವಿ ಹರ್ಷರಿಚಾರ್ಯ ಒಂದು ರೇಂಜ್ ನಲ್ಲಿ ಟ್ರೆಂಡಿಂಗ್ ಆಗಿದ್ದಾರೆ.
ಇವರ ನಡುವೆ.. ವೈರಲ್ ಆದ ರುದ್ರಾಕ್ಷಿ ಮಾರುವ ಯುವತಿಯನ್ನು ಸಂದರ್ಶಿಸಲು ಹಲವು ಮಾಧ್ಯಮಗಳು ಪೈಪೋಟಿ ನಡೆಸುತ್ತಿವೆ. ಬ್ಯಾಕ್.. ಫ್ರಂಟ್ ತೋರಿಸೋದು ಬಿಟ್ಟು ಈ ರೀತಿ ವಿಡಿಯೋ ಮಾಡಿ..ಕಳೆದ ನಾಲ್ಕೈದು ದಿನಗಳಿಂದ ಸೋಷಿಯಲ್ ಮೀಡಿಯಾದಲ್ಲಿ ಎಲ್ಲಿ ನೋಡಿದರೂ ಈಕೆಯ ಸೌಂದರ್ಯ ವಿಚಾರವೇ ಸುದ್ದಿಯಾಗುತ್ತಿದೆ..
ಈ ಚೆಲುವೆಯ ಫೋಟೋಗಳು ಮತ್ತು ವಿಡಿಯೋಗಳು ಎಲ್ಲೆಡೆ ವ್ಯಾಪಕವಾಗಿ ಹರಿದಾಡುತ್ತಿವೆ.. ಆಕರ್ಷಕ ಕಣ್ಣು, ಕೃಷ್ಣ ವರ್ಣ.. ಸುಂದರವಾದ ನಗುವಿನ ಮೂಲಕ ಗಮನಸೆಳೆದಿದ್ದ ರೂಪವತಿಗೆ ವ್ಯಾಪರ ಮಾಡಲೂ ಜನ ಬಿಡುತ್ತಿಲ್ಲ..
ಕುಂಭಮೇಳದಲ್ಲಿ ಮಾಲೆ ಮತ್ತು ರುದ್ರಾಕ್ಷಗಳನ್ನು ಮಾರುತ್ತ ಜೀವನ ಸಾಗಿಸುತ್ತಿದ್ದ ಮೊನಾಲಿಸಾ.. ಇಂದೋರ್ನ ಹುಡುಗಿ. ಇದೀಗ ಈಕೆಯನ್ನು ಸಂದರ್ಶಿಸಲು ಯೂಟ್ಯೂಬರ್ಗಳು ಹಿಂದೆ ಬಿದ್ದಿದ್ದಾರೆ. ಇದರಿಂದ ಈಕೆ ವ್ಯಾಪರಕ್ಕೆ ಅಡ್ಡಿಯಾಗುತ್ತಿದೆ. ಅದಕ್ಕಾಗಿ ಎಲ್ಲರಿಂದ ತಪ್ಪಿಸಿಕೊಳ್ಳಲು ಸಾಧುಗಳ ಟೆಂಟ್ ಮೊರೆ ಹೋಗಬೇಕಾಗಿದೆ.
ಮೊನಾಲಿಸಾಗೆ ಇದು ವ್ಯಾಪಾರದ ಸಮಯ ಆದರೆ ಸಂದರ್ಶಕರು ಈಕೆಯ ಬೆನ್ನು ಹತ್ತಿದ್ದು ನಷ್ಟ ಅನುಭವಿಸಬೇಕಾಗಿದೆ. ಸೌಂದರ್ಯವೇ ಈಕೆಯ ಹೊಟ್ಟೆಗೆ ಶಾಪವಾಗಿ ಪರಿಣಮಿಸುತ್ತಿದೆ. ಇನ್ನಾದರೂ ಜನ ಆಕೆಯನ್ನ ಆಕೆಯ ಪಾಡಿಗೆ ಬಿಟ್ಟರೆ ತುಂಬಾ ಒಳ್ಳೆಯದು ಅಲ್ವಾ..