Home ಕರ್ನಾಟಕ ‘3ಕ್ಷೇತ್ರಗಳಲ್ಲಿ ಇಂದು ಮತದಾನ’ ರಾಜ್ಯದ ಜಿದ್ದಾಜಿದ್ದಿನ ಉಪಕದನ; ಚುನಾವಣಾ ಆಯೋಗ & ಪೊಲೀಸ್ ಇಲಾಖೆ ಹದ್ದಿನ ಕಣ್ಣು!

‘3ಕ್ಷೇತ್ರಗಳಲ್ಲಿ ಇಂದು ಮತದಾನ’ ರಾಜ್ಯದ ಜಿದ್ದಾಜಿದ್ದಿನ ಉಪಕದನ; ಚುನಾವಣಾ ಆಯೋಗ & ಪೊಲೀಸ್ ಇಲಾಖೆ ಹದ್ದಿನ ಕಣ್ಣು!

0
‘3ಕ್ಷೇತ್ರಗಳಲ್ಲಿ ಇಂದು ಮತದಾನ’ ರಾಜ್ಯದ ಜಿದ್ದಾಜಿದ್ದಿನ ಉಪಕದನ; ಚುನಾವಣಾ ಆಯೋಗ & ಪೊಲೀಸ್ ಇಲಾಖೆ ಹದ್ದಿನ ಕಣ್ಣು!

ಬೆಂಗಳೂರು, ನವೆಂಬರ್ 13: ರಾಜ್ಯದ ಮೂರು ವಿಧಾನಸಭೆ ಕ್ಷೇತ್ರಗಳಲ್ಲಿ ಇವತ್ತು ಮತದಾನ ಇದೆ.

ಶಿಗ್ಗಾವಿ, ಸಂಡೂರು, ಚನ್ನಪಟ್ಟಣ ಕ್ಷೇತ್ರಗಳ ಉಚುನಾವಣೆಯ ಹಿನ್ನೆಲೆ ಇಂದು ಚುನಾವಣೆ ಆಯೋಗದ ಅಧಿಸೂಚನೆ ಮೇರೆಗೆ ಬೆಳಗ್ಗೆ 7 ರಿಂದ ಸಂಜೆ 6 ರವರೆಗೆ ಹಕ್ಕು ಚಲಾವಣೆಗೆ ಅವಕಾಶ ಇದೆ.

ಮೂರೂ ಕ್ಷೇತ್ರಗಳಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಒದಗಿಸಲಾಗಿದೆ. ಸೂಕ್ಷ್ಮ, ಅತಿ ಸೂಕ್ಷ್ಮ ಮತಗಟ್ಟೆಗಳಲ್ಲಿ ಆಯೋಗ ಕಣ್ಣಾವಲು ಇಟ್ಟಿದೆ.

ಇಂದು ಮುದ್ರೆ ಒತ್ತಲಿರುವ ಮತದಾರ ಪ್ರಭುವಿನತ್ತ ಪಕ್ಷಗಳ ಚಿತ್ತ ನೆಟ್ಟಿದೆ. ಮೂರೂ ಕ್ಷೇತ್ರಗಳು ತುರುಸಿನ ಪೈಪೋಟಿಯಿಂದ ಕೂಡಿವೆ. ಮತದಾರ ಬುಧವಾರ (ಇಂದು )ತನ್ನ ಅಂತಿಮ ತೀರ್ಪನ್ನು ಇವಿಎಂಗಳಲ್ಲಿ ನೀಡಲಿದ್ದಾನೆ.

ಮತಗಟ್ಟೆಗಳಿಗೆ ತೆರಳಿದ ಸಿಬ್ಬಂದಿಮೂರೂ ಕ್ಷೇತ್ರಗಳಿಗೆ ಮತಯಂತ್ರಗಳೊಂದಿಗೆ ಚುನಾವಣೆ ಸಿಬ್ಬಂದಿ ಮಂಗಳವಾರ ಸಂಜೆಯ ವೇಳೆಗೆ ತಲುಪಿದ್ದು, ಸುಗಮ ಮತದಾನಕ್ಕೆ ಎಲ್ಲಾ ಸಿದ್ಧತೆ ಮಾಡಿಕೊ೦ಡಿದ್ದಾರೆ.

LEAVE A REPLY

Please enter your comment!
Please enter your name here