Home ಕರ್ನಾಟಕ ವೈಭವದ ಜಂಬೂಸವಾರಿ! ಆಕರ್ಷಕ ಪಂಜಿನ ಕವಾಯತು; ದಸರೆಗೆ ವರ್ಣರಂಜಿತ ತೆರೆ!

ವೈಭವದ ಜಂಬೂಸವಾರಿ! ಆಕರ್ಷಕ ಪಂಜಿನ ಕವಾಯತು; ದಸರೆಗೆ ವರ್ಣರಂಜಿತ ತೆರೆ!

0
ವೈಭವದ ಜಂಬೂಸವಾರಿ! ಆಕರ್ಷಕ ಪಂಜಿನ ಕವಾಯತು; ದಸರೆಗೆ ವರ್ಣರಂಜಿತ ತೆರೆ!

ಮೈಸೂರು, ಅಕ್ಟೋಬರ್ 12: ವಿಶ್ವವಿಖ್ಯಾತ ಜಂಬೂ ಸವಾರಿ ಮೆರವಣಿಗೆ ಅದ್ಧೂರಿಯಿಂದ ನಡೆದಿದ್ದು, 10 ದಿನಗಳ ದಸರಾ, ನವರಾತ್ರಿ ಆಚರಣೆಗೆ ವಿಧ್ಯುಕ್ತ ತೆರೆ ಬಿದ್ದಿದೆ.

ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್, ಮೈಸೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪುಷ್ಪಾರ್ಚನೆ ಮಾಡುವ ಮೂಲಕ, ನಾಡದೇವಿ ಚಾಮುಂಡೇಶ್ವರಿಯನ್ನು ಹೊತ್ತ ಜಂಬೂಸವಾರಿ ಮೆರವಣಿಗೆಗೆ ಚಾಲನೆ ನೀಡಿದರು.

ಅರಮನೆಯಿಂದ ಬನ್ನಿಮಂಟಪದವರೆಗೆ ಜಂಬೂಸವಾರಿ ಮೆರವಣಿಗೆ ಸಾಗಿದ್ದು, ಬರೊಬ್ಬರಿ 49 ಸ್ತಬ್ದಚಿತ್ರಗಳು, ವಿವಿಧ ಕಲಾತಂಡಗಳು ಭಾಗಿಯಾಗಿತ್ತು. ಲಕ್ಷಾಂತರ ಜನರು ದಸರಾ ಜಂಬೂಸವಾರಿ ಮೆರವಣಿಗೆಯನ್ನು ಕಣ್ತುಂಬಿಕೊಂಡರು.

ಅರಮನೆಯಿಂದ ಶುರುವಾದ ಜಂಬೂ ಸವಾರಿ, ಕೆ.ಆರ್.ಸರ್ಕಲ್ , ಆರ್ಯವೇದ ಸರ್ಕಲ್‌, ತಿಲಕ್ ನಗರ, ಬಂಬೂ ಬಜಾರ್ ಮೂಲಕ ಬನ್ನಿ ಮಂಟಪ್ಪಕ್ಕೆ ತಲುಪಲಿದ್ದು ಸುಮಾರು 4 ರಿಂದ 5 ಕಿಲೋ ಮೀಟರ್ ಮೆರವಣಿಗೆ ನಡೆದಿದೆ.

ಜಂಬೂಸವಾರಿ ಮೆರವಣಿಗೆ ನಂತರ ಬನ್ನಿಮಂಟಪದ ಮೈದಾನದಲ್ಲಿ ದಸರಾ ಪಂಜಿನ ಕವಾಯತು ನಡೆಯಿತು.

LEAVE A REPLY

Please enter your comment!
Please enter your name here