
ಚನ್ನಮ್ಮನ ಕಿತ್ತೂರು, ಅಕ್ಟೊಬರ್ 24:ಕಿತ್ತೂರು ವಿಜಯೋತ್ಸವ 200 ರಿ ಸಂಭ್ರಮದಲ್ಲಿ ಜರುಗುತ್ತಿರುವ ಕಿತ್ತೂರು ಉತ್ಸವ 2024 ರಿ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಲು ನಾಳೆ ಸಿಎಂ ಸಿದ್ದರಾಮಯ್ಯ ಆಗಮಿಸುತ್ತಿದ್ದಾರೆ.
ಮೂರು ದಿನಗಳ ಕಾಲ ಜರುಗುವ ಕಿತ್ತೂರು ಉತ್ಸವದ ಸಮಾರೋಪ ಸಮಾರಂಭ ನಾಳೆ ನೆರವೇರಲಿದೆ. ಸಂಜೆ ಕಿತ್ತೂರು ಕೋಟೆ ಆವರಣದ ಮುಖ್ಯ ವೇದಿಕೆಯಲ್ಲಿ ಸಮಾರೋಪ ಸಮಾರಂಭದಲ್ಲಿ ಭಾಗಿಯಾಗಿ ಸಮಾರೋಪ ನುಡಿಗಳನ್ನಾಡಲಿದ್ದಾರೆ.
ಈ ಹಿನ್ನೆಲೆಯಲ್ಲಿ ಕಿತ್ತೂರು ಜನತೆ ಸಂತಸ ವ್ಯಕ್ತಪಡಿಸಿದ್ದಾರೆ. ಹೆಚ್ಚಿನ ಪೋಲಿಸ್ ಭದ್ರತೆ ಒದಗಿಸಲಾಗಿದ್ದು ಶ್ವಾನ ದಳದಿಂದ ಅಗತ್ಯ ಪರಿಶೀಲನೆ ಕೈಗಳ್ಳಲಾಯಿತು.