Home ಕರ್ನಾಟಕ ‘ಕಾಂಗ್ರೆಸ್ ಸರ್ಕಾರ ದಿವಾಳಿ’ ಖಜಾನೆ ಖಾಲಿ; ಗ್ಯಾರಂಟಿಗೆ ಹಣ ಹೊಂದಿಸಲು ಪರದಾಟ! ಮಾಜಿ PM HDD ವಾಗ್ದಾಳಿ

‘ಕಾಂಗ್ರೆಸ್ ಸರ್ಕಾರ ದಿವಾಳಿ’ ಖಜಾನೆ ಖಾಲಿ; ಗ್ಯಾರಂಟಿಗೆ ಹಣ ಹೊಂದಿಸಲು ಪರದಾಟ! ಮಾಜಿ PM HDD ವಾಗ್ದಾಳಿ

0
‘ಕಾಂಗ್ರೆಸ್ ಸರ್ಕಾರ ದಿವಾಳಿ’ ಖಜಾನೆ ಖಾಲಿ; ಗ್ಯಾರಂಟಿಗೆ ಹಣ ಹೊಂದಿಸಲು ಪರದಾಟ! ಮಾಜಿ PM HDD ವಾಗ್ದಾಳಿ

ರಾಮನಗರ, ನವೆಂಬರ್ 11: ಗ್ಯಾರಂಟಿಗಳನ್ನು ಘೋಷಿಸಿರುವ ಕಾಂಗ್ರೆಸ್ ಸರ್ಕಾರ ಸಂರ್ಪಕವಾಗಿ ನಿರ್ವಹಿಸುವಲ್ಲಿ ಎಡವಿದೆ. ಅನಗತ್ಯ ವೆಚ್ಚಕ್ಕಾಗಿ ಖಜಾನೆ ಖಾಲಿ ದಿವಾಳಿ ಮಾಡಿದೆ. ಈಗ ಮಹಿಳೆಯರಿಗೆ ಗೃಹಲಕ್ಷ್ಮಿ ಯೋಜನೆಯ ಹಣಕ್ಕಾಗಿ ಪರದಾಡುವಂತಾಗಿದೆ. ಎಂದು ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ ವಾಗ್ದಾಳಿ ಮಾಡಿದರು.

ಚನ್ನಪಟ್ಟಣ ವಿಧಾನಸಭೆ ಕ್ಷೇತ್ರದ ಉಪಚುನಾವಣೆಯಲ್ಲಿ ಜೆಡಿಎಸ್​ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಪರ ಮತಯಾಚಿಸಿ ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರ ಅಪರಿಮಿತವಾಗಿ ಚುನಾವಣಾ ಅಕ್ರಮಗಳನ್ನು ಎಸಗುತ್ತಿದೆ ಎಂದು ಪ್ರಹಾರ ನಡೆಸಿದರು.

ತನ್ನ ಅಕ್ರಮ ವ್ಯವಹಾರಗಳಿಗಾಗಿ ಗ್ಯಾರಂಟಿ ಯೋಜನೆಗಳನ್ನು ಕೂಡ ಬಳಕೆ ಮಾಡಿಕೊಳ್ಳುತ್ತಿದೆ. ಈಗಾಗಲೇ ದಿವಾಳಿಯಾಗಿರುವ ಸರ್ಕಾರ ಉಪಚುನಾವಣೆ ಮುಗಿದ ಮೇಲೆ‌ ಗೃಹಲಕ್ಷ್ಮಿ ಹಣ ಜಮೆ ಮಾಡುವುದನ್ನು ನಿಲ್ಲಿಸುತ್ತದೆ ಎಂದರು ಭವಿಷ್ಯ ನುಡಿದರು.

LEAVE A REPLY

Please enter your comment!
Please enter your name here