
ಚನ್ನಮ್ಮನ ಕಿತ್ತೂರು, ನವೆಂಬರ್ 15: ಸಮೀಪದ ದೇವರಶೀಗಿಹಳ್ಳಿ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ವಿರೂಪಾಕ್ಷಪ್ಪ ಬಿದರಿ ಅವರು ಮಕ್ಕಳು ಮತ್ತು ಶಿಕ್ಷಕ, ಶಿಕ್ಷಕಿಯರಿಗೆ ಕುಡಿಯುವ ನೀರಿಗಾಗಿ ಅಪಾರ ಮೌಲ್ಯದ ವಾಟರ್ ಪ್ಯೂರಿಪಾಯರ್ ನ್ನು ದೇಣಿಗೆಯಾಗಿ ನೀಡಿದ್ದಾರೆ.
ಶುದ್ಧ ನೀರು ಆರೋಗ್ಯದ ಮೂಲ ಎಂದು ತಿಳಿಸಿದ ವಿರೂಪಾಕ್ಷಪ್ಪ ಬಿದರಿ ಅವರು, ಮಕ್ಕಳು ಹಾಗೂ ಶಿಕ್ಷಕ, ಶಿಕ್ಷಕಿಯರು ಈ ವಾಟರ್ ಪ್ಯೂರಿಪಾಯರ್ ನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಹೇಳಿದರು.
ದೇಣಿಗೆ ನೀಡಿದ ಬಿದರಿ ಅವರಿಗೆ ಈ ಸಂದರ್ಭದಲ್ಲಿ ಶಾಲೆಯ ಶಿಕ್ಷಕ ಮತ್ತು ಶಿಕ್ಷಕಿಯರು ಜೊತೆಗೆ ವಿದ್ಯಾರ್ಥಿಗಳು ಧನ್ಯವಾದಗಳನ್ನು ತಿಳಿಸಿದ್ದಾರೆ.