Home ರಾಜಕೀಯ ಅನಿಲ್ ದೇಶಮುಖ್ ಕಾರಿನ ಮೇಲೆ ದಾಳಿ; ಕಲ್ಲು ತೂರಾಟಕ್ಕೆ ದೇಶಮುಖ್ ಗೆ ಗಾಯ ; ಪ್ರಚಾರ ವೇಳೆ ದುರಂತ!

ಅನಿಲ್ ದೇಶಮುಖ್ ಕಾರಿನ ಮೇಲೆ ದಾಳಿ; ಕಲ್ಲು ತೂರಾಟಕ್ಕೆ ದೇಶಮುಖ್ ಗೆ ಗಾಯ ; ಪ್ರಚಾರ ವೇಳೆ ದುರಂತ!

0
ಅನಿಲ್ ದೇಶಮುಖ್  ಕಾರಿನ ಮೇಲೆ ದಾಳಿ; ಕಲ್ಲು ತೂರಾಟಕ್ಕೆ ದೇಶಮುಖ್ ಗೆ ಗಾಯ ; ಪ್ರಚಾರ ವೇಳೆ ದುರಂತ!

ಪುಣೆ, ನವೆಂಬರ್ 19: ನಿನ್ನೆ ಸಂಜೆ ಹೊತ್ತು ಶರದ್ ಪವಾರ್ ಬಣದ ನಾಯಕ ಹಾಗೂ ಮಹಾರಾಷ್ಟ್ರದ ಮಾಜಿ ಗೃಹ ಸಚಿವ ಅನಿಲ್ ದೇಶಮುಖ್ ಅವರ ಕಾರಿನ ಮೇಲೆ ಕಟೋಲ್‌ನಲ್ಲಿ ಕಲ್ಲು ತೂರಾಟ ನಡೆದಿದೆ.

ದೇಶಮುಖ್ ಅವರ ತಲೆಗೆ ಗಾಯವಾಗಿದ್ದು, ರಕ್ತಸ್ರಾವವಾಗಿದೆ. ಘಟನೆ ನಡೆದ ತಕ್ಷಣ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ದಾಳಿ ನಡೆಸಿದವರ ಬಗ್ಗೆ ಇನ್ನೂ ಮಾಹಿತಿ ಸಿಕ್ಕಿಲ್ಲ.

ಮಹಾರಾಷ್ಟ್ರ ಚುನಾವಣಾ ಪ್ರಚಾರದ ಕೊನೆಯ ದಿನವಾಗಿತ್ತು. ಸಂಜೆ ಐದು ಗಂಟೆಗೆ ಪ್ರಚಾರ ಕೊನೆಗೊಂಡಿತು. ದೇಶ್‌ಮುಖ್ ಅವರು ಕಟೋಲ್‌ನಿಂದ ನಾಗ್ಪುರ ನಗರಕ್ಕೆ ಹಿಂತಿರುಗುತ್ತಿದ್ದರು. ಈ ವೇಳೆ ಅವರ ಬೆಂಗಾವಲು ವಾಹನದ ಮೇಲೆ ಅಪರಿಚಿತರು ದಾಳಿ ನಡೆಸಿದ್ದಾರೆ.

ಮಾಜಿ ಗೃಹ ಸಚಿವರು ಕಾರಿನ ಮುಂದಿನ ಸೀಟಿನಲ್ಲಿ ಕುಳಿತಿದ್ದರು. ಅವರ ಕಾರಿನ ಕಿಟಕಿ ತೆರೆದಿತ್ತು ಎಂದು ಹೇಳಲಾಗುತ್ತಿದೆ.

LEAVE A REPLY

Please enter your comment!
Please enter your name here