Home ರಾಜಕೀಯ ಸಂಸತ್ತು ಚಳಿಗಾಲ ಅಧಿವೇಶನ: ಉಭಯ ಸದನಗಳಲ್ಲಿ ಕೋಲಾಹಲ; ನ.27ಕ್ಕೆ ಕಲಾಪ ಮುಂದೂಡಿಕೆ!

ಸಂಸತ್ತು ಚಳಿಗಾಲ ಅಧಿವೇಶನ: ಉಭಯ ಸದನಗಳಲ್ಲಿ ಕೋಲಾಹಲ; ನ.27ಕ್ಕೆ ಕಲಾಪ ಮುಂದೂಡಿಕೆ!

0
ಸಂಸತ್ತು ಚಳಿಗಾಲ ಅಧಿವೇಶನ: ಉಭಯ ಸದನಗಳಲ್ಲಿ ಕೋಲಾಹಲ; ನ.27ಕ್ಕೆ ಕಲಾಪ ಮುಂದೂಡಿಕೆ!

ನವದೆಹಲಿ, ನವೆಂಬರ್ 25: ಸಂಸತ್ತಿನಲ್ಲಿ ಪ್ರಸಕ್ತ ಸಾಲಿನ ಚಳಿಗಾಲದ ಅಧಿವೇಶನ ಆರಂಭವಾಗುತ್ತಿದ್ದಂತೆ ಆಡಳಿತ ಮತ್ತು ಪ್ರತಿಪಕ್ಷಗಳ ನಡುವೆ ವಾಕ್ಸಮರ ನಡೆದ ಕಾರಣ ಉಭಯ ಸದನಗಳ ಕಲಾಪವನ್ನು ನವೆಂಬರ್ 27ಕ್ಕೆ ಮುಂದೂಡಲಾಗಿದೆ.

ಅಧಿವೇಶನದ ಮೊದಲ ದಿನದಂದು ಸದನವು ಸಭೆ ಸೇರಿದ ತಕ್ಷಣ, ಮಹಾರಾಷ್ಟ್ರದ ನಾಂದೇಡ್ ಕ್ಷೇತ್ರದಿಂದ ಸದನಕ್ಕೆ ಚುನಾಯಿತರಾಗಿದ್ದ ವಸಂತರಾವ್ ಚವಾಣ್ ಮತ್ತು ಪಶ್ಚಿಮ ಬಂಗಾಳದ ಬಸಿರ್ಹತ್ ಕ್ಷೇತ್ರದಿಂದ ಚುನಾಯಿತರಾಗಿದ್ದ ಎಸ್ಕೆ ನೂರುಲ್ ಇಸ್ಲಾಂ ಅವರ ನಿಧನಕ್ಕೆ ಸಂತಾಪ ಸೂಚಿಸಲಾಯಿತು.

ಬಳಿಕ ವಿಪಕ್ಷಗಳು ವಕ್ಫ್ ಮಂಡಳಿ ವಿವಾದ ಹಾಗೂ ಮಣಿಪುರ ಗಲಭೆ ಕುರಿತು ಚರ್ಚೆಗೆ ಆಗ್ರಹಿಸಿದವು. ಈ ವಿಷಯದಲ್ಲಿ ವಾಗ್ವಾದ ಆರಂಭಗೊಂಡಿದ್ದರಿಂದ ಲೋಕಸಭೆ ಮತ್ತು ರಾಜ್ಯಸಭೆಯ ಕಲಾಪಗಳನ್ನು ನ.27ಕ್ಕೆ ಮುಂದೂಡಲಾಯಿತು.

LEAVE A REPLY

Please enter your comment!
Please enter your name here