
ಚನ್ನಮ್ಮನ ಕಿತ್ತೂರು, ಡಿಸೆಂಬರ್ 03: ಕ್ಷೇತ್ರಶಿಕ್ಷಣಾಧಿಕಾರಿಗಳ ಕಾರ್ಯಾಲಯ ಮತ್ತು ಕ್ಷೇತ್ರಸಮನ್ವಯಾಧಿಕಾರಿಗಳ ಕಾರ್ಯಾಲಯ ಸ್ಥಳೀಯ ಶಾಸಕರ ಮಾದರಿ ಶಾಲೆಯಲ್ಲಿ ವಿಶ್ವ ವಿಕಲಚೇತನ ದಿನಾಚರಣೆಯನ್ನು ಅದ್ದೂರಿಯಾಗಿ ಆಚರಿಸಲಾಯಿತು.
ಸಭೆಗೆ ಅಧ್ಯಕ್ಷತೆ ವಹಿಸಿದ ಬಿಆರ್ಪಿ ಎಮ್.ವಾಯ್. ಕಡಕೋಳ ಅವರು ಮಾತನಾಡಿ, “ವಿಕಲಚೇತನ ಮಕ್ಕಳನ್ನು ಪ್ರೀತಿಯಿಂದ ಆರೈಕೆ ಮಾಡುತ್ತಾ, ಅವರನ್ನು ಸಮಾಜದ ಮುಖ್ಯವಾಹಿನಿಗೆ ತರಬೇಕಾಗಿದೆ” ಎಂದು ಮನವಿ ಮಾಡಿದರು.ಬಿಆರ್ಪಿ ಸ್ನೇಹಲ್ ಪೂಜೇರ ಅವರು ಹೆಲೆನ್ ಕೇಲರ್ ಮತ್ತು ಸುಧಾ ಚಂದ್ರನ್ ಅವರ ಸಾಧನೆಗಳನ್ನು ಉದಾಹರಿಸಿ, ಮಕ್ಕಳಿಗೆ ಸಿಗುವ ಸವಲತ್ತುಗಳ ಬಗ್ಗೆ ಮಾಹಿತಿಯನ್ನು ಹಂಚಿಕೊಂಡರು.
ಕಾರ್ಯಕ್ರಮದ ಅಂಗವಾಗಿ ವಿಕಲಚೇತನ ಮಕ್ಕಳಿಗೆ ಆಟೋಟ ಸ್ಪರ್ಧೆಗಳನ್ನು ಆಯೋಜಿಸಲಾಯಿತು. ಸ್ಪರ್ಧೆಯಲ್ಲಿ ಭಾಗವಹಿಸಿದ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಬಿಆರ್ಪಿ ಜ್ಯೋತಿ ಕೋಟಗಿ, ಪತ್ರಕರ್ತ ಕಲ್ಲಪ್ಪ ಅಗಿಸಿಮನಿ, ಎಸ್. ಪಾಟೀಲ, ಡಿ.ಎಚ್. ಪಾಟೀಲ, ಆರತಿ ಕಲಘಟಕರ, ಆದರ್ಶ ಘೋಡಗೇರಿ, ಮತ್ತು ವಿ.ಕೆ. ಹೊಳಿ ಉಪಸ್ಥಿತರಿದ್ದರು.ಈ ಕಾರ್ಯಕ್ರಮವು ಸಮರ್ಥೀಕೃತ ಸಮಾಜದ ರಚನೆಯತ್ತ ಒಂದು ಸಕಾರಾತ್ಮಕ ಹೆಜ್ಜೆ ಎಂದಾಗಿ ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು.