
ಚನ್ನಮ್ಮನ ಕಿತ್ತೂರು, ಅಕ್ಟೋಬರ್ 12: ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಸಲಹಾ ಸಮಿತಿ ಸದಸ್ಯರಾಗಿ ಆಯ್ಕೆಯಾದ ಮಾಜಿ ಜಿ.ಪಂ ಸದಸ್ಯರಾದ ರೋಹಿಣಿ ಬಾಬಾಸಾಹೇಬ ಪಾಟೀಲ ಅವರನ್ನು ದಸರಾ ಹಬ್ಬದ ಪ್ರಯುಕ್ತ ಸತ್ಕರಿಸಲಾಯಿತು.
ವಿಶ್ವ ವಿದ್ಯಾಲಯದಲ್ಲಿರುವ ರಾಣಿ ಚನ್ನಮ್ಮ ಅಧ್ಯಯನ ಪೀಠ ನಿರ್ವಹಣೆಗೆ ರಚನೆ ಮಾಡಿದ adhoc advisory committee ಗೆ ನೂತನ ಸದಸ್ಯರಾಗಿ ಹಲವರನ್ನು ಆಯ್ಕೆ ಮಾಡಲಾಗಿದೆ. ಶಿಕ್ಷಣ, ಸಾಹಿತ್ಯ, ರಾಜಕೀಯ ಕ್ಷೇತ್ರದಿಂದ ಜಿಲ್ಲೆಯ ಹಲವರನ್ನು ಆಯ್ಕೆ ಮಾಡಲಾಗಿದೆ.
ಕಿತ್ತೂರು ಭಾಗದಿಂದ ಸಂಪಗಾವಿ ಕ್ಷೇತ್ರದ ಜಿಲ್ಲಾ ಪಂಚಾಯತ ಮಾಜಿ ಸದಸ್ಯೆ ರೋಹಿಣಿ ಪಾಟೀಲ ಆಯ್ಕೆ ಆಗಿದ್ದಾರೆ. ಕ್ಷೇತ್ರದ ಪಾಟೀಲ ಅವರ ಅಭಿಮಾನಿಗಳು ಸತ್ಕರಿಸಿ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.
ಈ ಸಂದರ್ಭದಲ್ಲಿ ದಂತ ವೈದ್ಯ ಡಾ. ಜಗದೀಶ್ ಹಾರುಗೊಪ್ಪ, ಬಸವರಾಜ ಚಿನಗುಡಿ, ಸಿದ್ದರಾಮ ತಳವಾರ ಇತರರು ಉಪಸ್ಥಿತರಿದ್ದರು.