Home ಕರ್ನಾಟಕ ‘ಅದಿರು ಅಡ್ಡಾ’ಅಚ್ಚರಿ! ಮಾಫಿಯಾ ಹೇಗೆ ಗೊತ್ತಾಯಿತು? ಪ್ರಕರಣದ ಬೆಳವಣಿಗೆಗಳು ಇಲ್ಲಿವೆ!

‘ಅದಿರು ಅಡ್ಡಾ’ಅಚ್ಚರಿ! ಮಾಫಿಯಾ ಹೇಗೆ ಗೊತ್ತಾಯಿತು? ಪ್ರಕರಣದ ಬೆಳವಣಿಗೆಗಳು ಇಲ್ಲಿವೆ!

0
‘ಅದಿರು ಅಡ್ಡಾ’ಅಚ್ಚರಿ! ಮಾಫಿಯಾ ಹೇಗೆ ಗೊತ್ತಾಯಿತು? ಪ್ರಕರಣದ ಬೆಳವಣಿಗೆಗಳು ಇಲ್ಲಿವೆ!

ಕಾರವಾರ, ಅಕ್ಟೋಬರ್ 27: 2009ರಲ್ಲಿ ಅದಿರು ರಫ್ತು ವ್ಯವಹಾರದಲ್ಲಿ ತೊಡಗಿದ್ದ ಮಲ್ಲಿಕಾರ್ಜುನ ಶಿಪ್ಪಿಂಗ್ ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಸತೀಶ ಸೈಲ್ ಮೊದಲ ಬಾರಿಗೆ ಚುನಾವಣೆಯಲ್ಲಿ ಕಾಂಗ್ರೆಸ್‍ನಿಂದ ಸ್ಪರ್ಧೆ ಮಾಡಿದ್ದರು. 2009ರ ಮಾರ್ಚ್ 20ರಂದು ₹350 ಕೋಟಿ ಮೌಲ್ಯದ 8.5 ಲಕ್ಷ ಟನ್ ಅದಿರು ಬೇಲೆಕೇರಿಯಲ್ಲಿ ಅರಣ್ಯ ಇಲಾಖೆಯಿಂದ ವಶಪಡಿಸಿಕೊಳ್ಳಲಾಗಿತ್ತು.

2009ರ ಜೂನ್ 2ರಂದು ₹250 ಕೋಟಿ ಮೌಲ್ಯದ ಅದಿರು ನಾಪತ್ತೆಯಾಗಿರುವುದು ಪತ್ತೆಯಾಗಿತ್ತು. 2013ರ ಮೇನಲ್ಲಿ ಕಾರವಾರ ಕ್ಷೇತ್ರದಿಂದ ಪಕ್ಷೇತರ ಶಾಸಕರಾಗಿ ಸತೀಶ ಸೈಲ್ ಆಯ್ಕೆ ಆಗಿದ್ದರು. ಅದಿರು ನಾಪತ್ತೆ ಪ್ರಕರಣಕ್ಕೆ ಸಂಬಂಧಿಸಿ 2013ರ ಸೆ.25 ರಂದು ಶಾಸಕರಾಗಿದ್ದ ಸೈಲ್ ಸಿಬಿಐನಿಂದ ಬಂಧನ ಆಗಿದ್ದರು.

2014ರ ಡಿ.4 ರಂದು ಜಾಮೀನಿನ ಮೇಲೆ ಜೈಲಿನಿಂದ ಬಿಡುಗಡೆಯಾಗಿದ್ದ ಶಾಸಕ ಸತೀಶ ಸೈಲ್2023ರ ಮೇನಲ್ಲಿ ಕಾಂಗ್ರೆಸ್‍ನಿಂದ ಸೈಲ್ ಶಾಸಕರಾಗಿ ಆಯ್ಕೆ ಆಗಿದ್ದರು. 2024ರ ಅ.24 ರಂದು ಅಪರಾಧಿ ಎಂಬುದು ಸಾಬೀತು ಆಗಿದೆ.

ಅಪರಾಧ ಸಾಬೀತಾದಮೇಲೆ ಶಾಸಕ ಸೈಲ್ ಗೆ 7ವರ್ಷ ಜೈಲು, 40ಕೋಟಿ ದಂಡ ವಿಧಿಸಿ ಬೆಂಗಳೂರಿನ ಜನಪ್ರತಿನಿಧಿಗಳ ಕೋರ್ಟ್ ಶನಿವಾರ (ಅ. 26) ಆದೇಶ ಹೊರಡಿಸಿದೆ.

LEAVE A REPLY

Please enter your comment!
Please enter your name here