Home ಸ್ಥಳೀಯ ಅಮೃತ 2.0 ಯೋಜನೆಯ ವಾಟರ್ ಮೀಟರ್ ಹಾಗೂ ವಾಲ್ಗಳ ಕಳ್ಳರ ಬಂಧನ

ಅಮೃತ 2.0 ಯೋಜನೆಯ ವಾಟರ್ ಮೀಟರ್ ಹಾಗೂ ವಾಲ್ಗಳ ಕಳ್ಳರ ಬಂಧನ

0
ಅಮೃತ 2.0 ಯೋಜನೆಯ ವಾಟರ್ ಮೀಟರ್ ಹಾಗೂ ವಾಲ್ಗಳ ಕಳ್ಳರ ಬಂಧನ

ಎಂ.ಕೆ.ಹುಬ್ಬಳ್ಳಿ: ಎಮ್ ಕೆ. ಹುಬ್ಬಳ್ಳಿ ವ್ಯಾಪ್ತಿಯಲ್ಲಿ ಕೇಂದ್ರ ಸರಕಾರದ ಅಮೃತ 2.0 ಯೋಜನೆಯಲ್ಲಿ ವಾಟರ್ ಸಪ್ಲೈ ಕೆಲಸದ ಸಲುವಾಗಿ ಎಮ್ ಕೆ ಹುಬ್ಬಳ್ಳಿ ಪಟ್ಟಣದ ಪರುಶರಾಮ ಬಸವಣ್ಣೆಪ್ಪ ಗಾಣಿಗೇರ ಇವರ ಕೋಳಿ ಪಾರ್ಮ್ ಶೆಡ್‌ದಲ್ಲಿ ಇರಿಸಿದ್ದ ಕೊನಾರ್ಕ ಕಂಪನೀಯ 47 ಬಾಕ್ಸ್ ವಾಟರ್ ಮೀಟರ್‌ಗಳು ಹಾಗೂ ವಾಲ್ಟಗಳನ್ನು ದಿನಾಂಕ: 19/11/2024 ರಂದು ರಾತ್ರಿ ಕೋಳಿ ಪಾರ್ಮದ ಹಿತ್ತಲ ಬಾಗಿಲಿನಿಂದ ಬಂದು ಕಳ್ಳತನ ಆಗಿರುವ ಬಗ್ಗೆ ಕಿತ್ತೂರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಈ ಕುರಿತು ತನಿಖೆ ಕೈಗೊಂಡಿದ್ದು ಆರೋಪಿಗಳನ್ನು ಪತ್ತೆ ಹಚ್ಚಲಾಗಿದೆ. ಮಹಮ್ಮದ ರಫೀಕ ಮೆಹಬೂಬಸಾಬ ನದಾಫ ಸಾ॥ ಶಿಂಗನಹಳ್ಳಿ ತಾ|| ಧಾರವಾಡ ಹಾಗೂ ಅವನ ಇನ್ನಿಬ್ಬರು ಸಹಚರರಿಂದ ಸುಮಾರು 9,28,000/- ರೂಪಾಯಿ ಮೌಲ್ಯದ ಅಮೃತ 2.0 ಯೋಜನೆಯ 47 ಬಾಕ್ಸ್ ವಾಟರ್ ಮೀಟರ್ ಹಾಗೂ ವಾಲ್ಸಗಳನ್ನು ವಶಪಡಿಸಿಕೊಳ್ಳಲಾಗಿದೆ.

ರವಿ ಡಿ. ನಾಯ್ಕ ಡಿ.ಎಸ್.ಪಿ ಬೈಲಹೊಂಗಲ ರವರ ಮಾರ್ಗದರ್ಶನದಲ್ಲಿ ಶಿವಾನಂದ ಗುಡಗನಟ್ಟಿ ಸಿಪಿಐ ಕಿತ್ತೂರ ವೃತ್ತದ ಪಿ.ಎಸ್.ಐ ಪ್ರವೀಣ ಗಂಗೋಳ, ಹಾಗೂ ಪ್ರವೀಣ ಕೋಟಿ ಮತ್ತು ಸಿಬ್ಬಂದಿಗಳು ಈ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದು, ಕಿತ್ತೂರು ಪೋಲಿಸ್ ಅಧಿಕಾರಿಗಳ ಈ ಕಾರ್ಯವನ್ನು ಬೆಳಗಾವಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಭೀಮಾಶಂಕರ ಗುಳೇದ ಮತ್ತು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಶೃತಿ ಎಚ್.ಎನ್. & ಆರ್.ಬಿ ಬಸರಗಿಯವರು ಅಭಿನಂದಿಸಿದ್ದಾರೆ.

LEAVE A REPLY

Please enter your comment!
Please enter your name here