
ಬೆಂಗಳೂರು, ನವೆಂಬರ್ 30: ಇಂದು (ಶನಿವಾರ)ಸಂಜೆ 4.30ಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಗೃಹ ಕಚೇರಿ ಕೃಷ್ಣಾದಲ್ಲಿ ಮಹತ್ವದ ಸಭೆ ಕರೆದಿದ್ದಾರೆ.
ಬಳ್ಳಾರಿ, ದಾವಣೆಗೆರೆ, ಬೆಳಗಾವಿ ಜಿಲ್ಲಾಸ್ಪತ್ರೆಗಳಲ್ಲಿ ಗರ್ಭಿಣಿಯರು, ಬಾಣಂತಿಯರು, ನವಜಾತ ಶಿಶುಗಳು ಸಾವನ್ನಪ್ಪಿರುವ ಪ್ರಕರಣಗಳು ರಾಜ್ಯದ ಗಮನ ಸೆಳೆದಿವೆ. ಅಲ್ಲದೇ ಪ್ರತಿಪಕ್ಷಗಳ ದಾಳಿಗೂ ಆಹಾರವಾಗಿವೆ.
ಈ ಪ್ರಕರಣವನ್ನು ಉನ್ನತ ತನಿಖೆಗೆ ಕೊಡಬೇಕು ಅಂತ ವಿಪಕ್ಷ ಒತ್ತಾಯವನ್ನೂ ಮಾಡುತ್ತಿದೆ. ಈ ಹಿನ್ನೆಲೆಯಲ್ಲಿ ಶನಿವಾರದ ಸಿಎಂ ಸಭೆ ಕುತೂಹಲ ಮೂಡಿಸಿದೆ.