
ಚನ್ನಮ್ಮನ ಕಿತ್ತೂರು, ನವೆಂಬರ್ 06: ವಕ್ಫ್ ಮಂಡಳಿಯಿಂದ ಕಿತ್ತೂರು ತಾಲೂಕಿನ ಕೆಲವು ಆಸ್ತಿಗಳಿಗೆ ವಕ್ಫ್ ಎಂದು ದಾಖಲಿಸಲು ಪತ್ರ ಬಂದಿದೆ ಎಂದು ತಹಶೀಲ್ದಾರ್ ರವೀಂದ್ರ ಹಾದಿಮನಿ ತಿಳಿಸಿದ್ದಾರೆ.
ತಾಲೂಕಿನ 34 ಜಮೀನುಗಳ ಕಾಲಂ ನಂ.11ರಲ್ಲಿ ವಕ್ಫ್ ಎಂದು ದಾಖಲಿಸಬೇಕು ಎನ್ನುವ ಸೂಚನಾ ಪತ್ರ ತಹಶೀಲ್ದಾರ್ ಕಚೇರಿ ತಲುಪಿದೆ ಎನ್ನಲಾಗುತ್ತಿದೆ . ಆದರೆ ಈ ಕುರಿತಾಗಿ ತಹಶೀಲ್ದಾರ್ ಹಾದಿಮನಿ ಅವರು ಇದುವರೆಗೂ ರೈತರಿಗೆ ನೋಟಿಸ್ ನೀಡಿಲ್ಲ ಎಂದು ತಿಳಿಸಿದ್ದಾರೆ.
ಎಮ್.ಕೆ.ಹುಬ್ಬಳ್ಳಿ ಸಕ್ಕರೆ ಕಾರ್ಖಾನೆ ಸಂಬಂಧಿತ ಆಸ್ತಿ, ಎಂ.ಕೆ.ಹುಬ್ಬಳ್ಳಿ ಪಟ್ಟಣ ಪಂಚಾಯಿತಿ ಕಚೇರಿ ಜಾಗ ವಕ್ಫ್ ಗೆ ಸೇರಿಸಿಕೊಳ್ಳಲು ಸೂಚಿಸಲಾಗಿದೆ ಎಂದು ಹೇಳಲಾಗುತ್ತಿದೆ.
ಅಲ್ಲದೇ ಕಿತ್ತೂರು, ಎಂ.ಕೆ.ಹುಬ್ಬಳ್ಳಿ, ಖೋದಾನಪುರ, ಅಂಬಡಗಟ್ಟಿ ದಾಸ್ತಿಕೊಪ್ಪ ಹುಣಶೀಕಟ್ಟೆ ಸವಟಗಿ, ಉಗರಖೋಡ ಗ್ರಾಮಗಳ ಆಸ್ತಿಗಳಿಗೆ ವಕ್ಫ್ ಮುದ್ರೆ ಒತ್ತಲು ಸೂಚಿಸಲಾಗಿದೆ ಎಂದು ಹೇಳಲಾಗುತ್ತಿದೆ.
ಒಟ್ಟಿನಲ್ಲಿ ವಕ್ಫ್ ಭೂತ ಚೆನ್ನಮ್ಮನ ನೆಲಕ್ಕೂ ಹಬ್ಬಿರುವ ಸಮಾಚಾರ ಸ್ವಾಭಿಮಾನಿ, ರೈತರನ್ನು ನಿದ್ದೆಗೆಡಿಸಿದೆ.