
ಜಮಖಂಡಿ, ನವೆಂಬರ್ 08: ಜಮಖಂಡಿ ಓಲೇಮಠದ ಡಾ.ಅಭಿನವ ಕುಮಾರ ಸ್ವಾಮಿಗಳವರು ಇಂದು ಲಿಂಗೈಕ್ಯರಾಗಿದ್ದಾರೆ.
ಅಪರೂಪದ ವಾಗ್ಮಿಗಳು, ಪಂಡಿತರೂ ಆಗಿದ್ದ ಪೂಜ್ಯರು ಹಂಪಿ ಕನ್ನಡ ವಿಶ್ವವಿದ್ಯಾಲಯದಿಂದ ಮಗ್ಗೆಯ ಮಾಯಿದೇವರ ಶಿವಾನುಭವ ಸೂತ್ರ ಒಂದು ಅಧ್ಯಯನ ಎಂಬ ಮಹಾಪ್ರಬಂಧ ಬರೆದು ಪಿಎಚ್.ಡಿ ಪದವಿ ಪಡೆದಿದ್ದರು.
ನಾಗನೂರು ರುದ್ರಾಕ್ಷಿಮಠದ ಡಾ. ಶಿವಬಸವ ಸ್ವಾಮೀಜಿ ಅವರ ಪ್ರಸಾದ ನಿಲಯದಲ್ಲಿದ್ದು ಅಧ್ಯಯನ ಮಾಡಿದ್ದ ಪೂಜ್ಯರು ಇತ್ತೀಚೆಗೆ ಬಸವಣ್ಣನವರನ್ನು ಕುರಿತು ದ್ವಿಪದಿ ಮಹಾಕಾವ್ಯ ರಚಿಸಿದ್ದಾರೆ.
ಪೂಜ್ಯರ ಅಗಲುವಿಕೆಯಿಂದ ಕನ್ನಡ ನಾಡು ಬಡವಾಗಿದೆ. ಪೂಜ್ಯರಿಗೆ ಅಂತಿಮ ನಮನಗಳು ಎಂದು ಭಕ್ತಗಣ ಸಂತಾಪ ಸೂಚಿಸುತ್ತಿದ್ದಾರೆ.